Prajodayaprakashana

Prajodayaprakashana ಸದಭಿರುಚಿಯ ಪುಸ್ತಕಗಳನ್ನು ಓದುಗರಿಗೆ ಪರಿಚಯಿಸುವ ಮತ್ತು ತಲುಪಿಸುವ ಪುಸ್ತಕದಂಗಡಿ

ಈ ಪುಸ್ತಕಗಳು ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ...* * *'ಬಾರುಕೋಲು' (ಪ್ರೊ.ಎಂ.ಡಿ.ನಂಜುಂಡಸ್ವಾಮಿ ಚಿಂತನೆ)ಪ್ರೊ.ಎಂ.ಡಿ.ನಂಜುಂಡಸ...
17/06/2026

ಈ ಪುಸ್ತಕಗಳು ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ...

* * *

'ಬಾರುಕೋಲು' (ಪ್ರೊ.ಎಂ.ಡಿ.ನಂಜುಂಡಸ್ವಾಮಿ ಚಿಂತನೆ)
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಬರಹಗಳು ಹಾಗೂ ಭಾಷಣಗಳನ್ನು ಹೊಂದಿರುವ ಕೃತಿಯನ್ನು ನಟರಾಜ್ ಹುಳಿಯಾರ್ ಮತ್ತು ರವಿಕುಮಾರ್ ಬಾಗಿ ಅವರು ಸಂಪಾದಕರಾಗಿ ರೂಪಿಸಿದ್ದಾರೆ

'ವಿಷ್ಣು ಕ್ರಾಂತಿ' (ಕವನ ಸಂಕಲನ)
ರಾಮು ಮೈಸೂರು ಅವರ ಕವನ ಸಂಕಲನ

'ಕಡಲು ನೋಡಲು ಹೋದವಳು' (ಲಲಿತ ಪ್ರಬಂಧಗಳು)
ಫಾತಿಮಾ ರಲಿಯಾ ಅವರ ಲಲಿತ ಪ್ರಬಂಧಗಳ ಸಂಕಲನ

'ಪರಿಮಳಗಳ ಮಾಯೆ' (ಲಲಿತ ಪ್ರಬಂಧಗಳು)
ಸಮತಾ ಆರ್ ಅವರ ಲಲಿತ ಪ್ರಬಂಧಗಳ ಸಂಕಲನ

'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' (ಲೇಖನಗಳು)
ಶರಣ ಚಳವಳಿ ಹಾಗೂ ವಚನ ಸಾಹಿತ್ಯ ಕುರಿತ ಡಾ.ಬಸವರಾಜ ಸಾದರ ಅವರ ಬರಹಗಳ ಸಂಕಲನ

'ಉಲಿವ ನಾದದ ಚರಣ' (ಸಂಗೀತ ಮೀಮಾಂಸೆ ಕುರಿತ ಬರಹಗಳು)
ಡಾ.ಜಯದೇವಿ ಜಂಗಮಶೆಟ್ಟಿ ಅವರ ಸಂಗೀತ ಮೀಮಾಂಸೆ ಕುರಿತ ಬರಹಗಳ ಸಂಕಲನ

* * *

ಆಸಕ್ತರು ಲಿಂಕ್ ಕ್ಲಿಕ್ಕಿಸುವ ಮೂಲಕ ಪ್ರಜೋದಯ ಪ್ರಕಾಶನದ Online Storeಗೆ ಭೇಟಿ ನೀಡಬಹುದು...
https://www.instamojo.com/prajodaya/

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಚಿಂತಕರ ಹತ್ಯೆಗಳಿಂದ ಯಾರಿಗೆ ಲಾಭ ಆಗುತ್ತದೆ ಎಂಬ ಕುರಿತು ಗೌರಿ ಅವರು ಬರೆದಿರುವ 'ನಿನ್ನೆ ಬಸವಣ್ಣ, ಇಂದು ಕಲಬುರ್ಗಿ' ಲೇಖನ 'ಗೌರಿ ಹೂವು' ಕೃತಿ...
16/06/2026

ಚಿಂತಕರ ಹತ್ಯೆಗಳಿಂದ ಯಾರಿಗೆ ಲಾಭ ಆಗುತ್ತದೆ ಎಂಬ ಕುರಿತು ಗೌರಿ ಅವರು ಬರೆದಿರುವ 'ನಿನ್ನೆ ಬಸವಣ್ಣ, ಇಂದು ಕಲಬುರ್ಗಿ' ಲೇಖನ 'ಗೌರಿ ಹೂವು' ಕೃತಿಯಲ್ಲಿದೆ. ಅದರ ಒಂದು ಪುಟ ನಿಮ್ಮ ಓದಿಗೆ...

ಲೇಖನದಲ್ಲಿ ಒಂದೆಡೆ ಗೌರಿ ಲಂಕೇಶ್ ಅವರು ಹೀಗೆ ಬರೆದಿದ್ದಾರೆ...
"ಕಲಬುರ್ಗಿ ಅವರ ಸಾವಿನಿಂದ ಭೌತಿಕವಾಗಿ ಯಾರಿಗೆ ಲಾಭವಾಗುತ್ತದೋ ಯಾರಿಗೂ ಗೊತ್ತಿಲ್ಲ. ಆದರೆ ಬಸವಣ್ಣ, ಕಲಬುರ್ಗಿಯಂಥ ಸುಧಾರಕರ ದನಿಗಳನ್ನು ಕ್ರೂರವಾಗಿ ಕೊಂದು ಹಾಕಿದಾಗ ಬಲಪಂಥೀಯ, ಫ್ಯಾಸಿಸ್ಟ್ ಶಕ್ತಿಗಳಿಗೆ ಸೈದ್ಧಾಂತಿಕವಾಗಿ ಲಾಭ ಆಗುತ್ತದೆ ಎಂಬುದಂತೂ ಸ್ಪಷ್ಟ. ಆದರೇನು, ವಿಚಾರಗಳು ಎಂದೂ ಸಾಯುವುದಿಲ್ಲ."

* * *

ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ 'ಗೌರಿ ಹೂವು' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/gowri-hoovu

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಪ್ರೊ.ಬಿ.ಗಂಗಾಧರಮೂರ್ತಿ ಅವರು ಅನುವಾದಿಸಿರುವ ನೂರು ಸೂಫಿ ಕತೆಗಳ ಸಂಕಲನ 'ಸೂಫಿ ಕಥಾಲೋಕ'ಕ್ಕೆ ಬೆನ್ನುಡಿ ಬರೆದಿರುವ ಯು ಆರ್ ಅನಂತಮೂರ್ತಿ ಅವರ ಅ...
16/06/2026

ಪ್ರೊ.ಬಿ.ಗಂಗಾಧರಮೂರ್ತಿ ಅವರು ಅನುವಾದಿಸಿರುವ ನೂರು ಸೂಫಿ ಕತೆಗಳ ಸಂಕಲನ 'ಸೂಫಿ ಕಥಾಲೋಕ'ಕ್ಕೆ ಬೆನ್ನುಡಿ ಬರೆದಿರುವ ಯು ಆರ್ ಅನಂತಮೂರ್ತಿ ಅವರ ಅನಿಸಿಕೆ...

ಲಡಾಯಿ ಪ್ರಕಾಶನ ಪ್ರಕಟಿಸಿರುವ 'ಸೂಫಿ ಕಥಾಲೋಕ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/-4641c

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

'ಚಮ್ಮಟಿಗೆ' ಅಂಬೇಡ್ಕರ್ ವಾದಿಯಾಗಿರುವ ವಿಕಾಸ್ ಆರ್ ಮೌರ್ಯ ಅವರ ಲೇಖನಗಳನ್ನು ಒಳಗೊಂಡಿರುವ ಕೃತಿ. ಪುಸ್ತಕಕ್ಕೆ ಮುನ್ನುಡಿ ಬರೆದಿರುವ ರಹಮತ್ ತರೀ...
15/06/2026

'ಚಮ್ಮಟಿಗೆ' ಅಂಬೇಡ್ಕರ್ ವಾದಿಯಾಗಿರುವ ವಿಕಾಸ್ ಆರ್ ಮೌರ್ಯ ಅವರ ಲೇಖನಗಳನ್ನು ಒಳಗೊಂಡಿರುವ ಕೃತಿ. ಪುಸ್ತಕಕ್ಕೆ ಮುನ್ನುಡಿ ಬರೆದಿರುವ ರಹಮತ್ ತರೀಕೆರೆ ಅವರು, "ಪ್ರಾಮಾಣಿಕವಾದ ವೇದನೆಯನ್ನೂ ಆಕ್ರೋಶವನ್ನು ಚಿಂತನೆಯಾಗಿ ಮಾರ್ಪಡಿಸುತ್ತಿರುವ ಸಂಯಮದ ಶೈಲಿ; ಎಚ್ಚರ ಮತ್ತು ಕನಸುಗಾರಿಕೆಯಿಂದ ಕೂಡಿದ ತರುಣ ಮನಸ್ಸು; ವರ್ತಮಾನದ ಇಂಡಿಯಾ ದಲಿತರನ್ನು ನಡೆಸಿಕೊಳ್ಳುತ್ತಿರುವ ಭೀಷಣ ವಾಸ್ತವವನ್ನು ಕಾಣಿಸುವಿಕೆ- ಇವು ಈ ಲೇಖನಗಳ ಮುಖ್ಯ ಚಹರೆಗಳು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಹರ್ನಿಶಿ ಪ್ರಕಾಶನ ಹೊರತಂದಿರುವ 'ಚಮ್ಮಟಿಗೆ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/-224e7

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಜ ನಾ ತೇಜಶ್ರೀ ಅವರ ಕಥಾ ಸಂಕಲನ 'ಬೆಳ್ಳಿಮೈ ಹುಳ' ಕುರಿತು ಸಚಿನ್ ಅಂಕೋಲಾ ಅವರ ಅನಿಸಿಕೆ..  *'ಬೆಳ್ಳಿಮೈ ಹುಳ' ಕೃತಿ ಓದಿದೆ. ಬಹಳ ಸೊಗಸಾಗ ಕಥೆಗ...
15/06/2026

ಜ ನಾ ತೇಜಶ್ರೀ ಅವರ ಕಥಾ ಸಂಕಲನ 'ಬೆಳ್ಳಿಮೈ ಹುಳ' ಕುರಿತು ಸಚಿನ್ ಅಂಕೋಲಾ ಅವರ ಅನಿಸಿಕೆ..

*

'ಬೆಳ್ಳಿಮೈ ಹುಳ' ಕೃತಿ ಓದಿದೆ. ಬಹಳ ಸೊಗಸಾಗ ಕಥೆಗಳು ಎಲ್ಲವೂ.. ಕೆಲವು ಚಿಕ್ಕ ಕಥೆಗಳು ಇನ್ನೂ ಕೆಲವು ದೊಡ್ಡ ಕಥೆಗಳು. ಆದರೆ ಎರಡನ್ನೂ ಕಟ್ಟಿಕೊಟ್ಟಿರುವ ಹದ ಪರಿಪೂರ್ಣವಾಗಿದೆ. ರಘುನಾಥ್ ಚ. ಹ. ಅವರು ಮುನ್ನುಡಿಯಲ್ಲಿ ಬರೆದಂತೆ ಇಲ್ಲಿನ ಕತೆಗಳೆಲ್ಲವೂ ಕವಿತೆಗಳೂ ಆಗಿವೆ ನಿಜ.. ಕಥೆಯನ್ನು ಕಟ್ಟುವಾಗ ವಹಿಸಬೇಕಾದ ಜಾಗರೂಕತೆ, ನಾಜೂಕು, ಸ್ಪಷ್ಟತೆ, ನಿಖರತೆ ಎಲ್ಲವೂ ಈ ಕತೆಗಳ ಹಿಂದೆ ಕೆಲಸ ಮಾಡಿದೆ. ಜೊತೆಗೆ ಎಲ್ಲಾ ಕತೆಗಳಲ್ಲೂ ಯಾವುದಾದರೂ ಒಂದು ಸಶಕ್ತ ರೂಪಕ ಜೀವ ಪಡೆದು ಕತೆಯನ್ನ ಹೆಚ್ಚು ವಾಚ್ಯವಾಗಿಸದೇ ಕುತೂಹಲವನ್ನ ಹಿಡಿದಿಟ್ಟುಕೊಂಡೇ ಸಾಗುತ್ತದೆ. ಪ್ರತಿಭಟನೆ ಎಲ್ಲಾ ಕತೆಗಳಲ್ಲೂ ಪಡೆದಿರುವ ಸುಪ್ತವಾದ ರೂಪ ಬಹಳ ಮೆಚ್ಚುಗೆಯಾಗುತ್ತದೆ.

- ಸಚಿನ್ ಅಂಕೋಲಾ
15-6-2021

*

'ಬೆಳ್ಳಿಮೈ ಹುಳ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/-94c04

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಹಸನ್ ನಯೀಂ ಸುರಕೋಡ ಅವರು ಅನುವಾದಿಸಿರುವ ರಾಮಮನೋಹರ ಲೋಹಿಯಾ ಅವರ ಲೇಖನವನ್ನೊಳಗೊಂಡಿರುವ 'ನಿರಾಶೆಯ ಕಾಲದ ಕರ್ತವ್ಯಗಳು' ಪುಸ್ತಕದ ಕುರಿತು ನಾಗೇಗ...
14/06/2026

ಹಸನ್ ನಯೀಂ ಸುರಕೋಡ ಅವರು ಅನುವಾದಿಸಿರುವ ರಾಮಮನೋಹರ ಲೋಹಿಯಾ ಅವರ ಲೇಖನವನ್ನೊಳಗೊಂಡಿರುವ 'ನಿರಾಶೆಯ ಕಾಲದ ಕರ್ತವ್ಯಗಳು' ಪುಸ್ತಕದ ಕುರಿತು ನಾಗೇಗೌಡ ಕೆ ಎಸ್ ಅವರ ಮೂರು ಪೋಸ್ಟ್ ಗಳು...

---

ನಿರಾಶೆಯ ಕಾಲದ ಕರ್ತವ್ಯಗಳು ಲೇಖನದಲ್ಲಿ ಲೋಹಿಯಾ ಒಂದು ಅಂಶವನ್ನು ಪ್ರಸ್ತಾಪಿಸುತ್ತಾರೆ. ಭಾರತದಲ್ಲಿ 1500 ವರ್ಷಗಳಿಂದ ಕ್ರಾಂತಿ ಅನ್ನುವುದು ಆಗೆ ಇಲ್ಲ ಅಂತ. ಇಲ್ಲಿರುವ ಕೆಲವು ಮಂದಿ ಸಾವಿರ ವರ್ಷಗಳಿಂದ ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಜನರ ಬೌದ್ಧಿಕತೆಯನ್ನು ತಿರುಚಿದ್ದಾರೆ. ಈ ದೇಶದಲ್ಲಿ ಕ್ರಾಂತಿ ಸಂಭವಿಸುವುದು ಅಸಂಭವ ಅನ್ನುವ ಮಾತನ್ನು ನಮ್ಮ ಬುದ್ಧಿ ಮನಸ್ಸಿನೊಳಗೆ ಆಳವಾಗಿ ಬೇರೂರುವಂತೆ ಮಾಡಿದ್ದಾರೆ.

ವೈಯಕ್ತಿಕವಾಗಿ ನನಗೆ ಹುಟ್ಟಿದ್ದಕ್ಕೆ ಶುಭಾಶಯ ಹೇಳುವ, ಸತ್ತಿದ್ದಕ್ಕೆ ಸಂತಾಪ ವ್ಯಕ್ತಪಡಿಸುವ ಅಭ್ಯಾಸ ಇಲ್ಲ. ಇವತ್ತು ಚೆ ಹುಟ್ಟಿದ ದಿನ ಅಂತ ನೋಡಿದೆ. ಅದಕ್ಕೆ ಇಷ್ಟು ಬರೆದೆ. ಚೆ ದಿಸೆಯಿಂದ ನಾವುಗಳು ಅಲೋಚಿಸಿ ಉತ್ತರ ಕಂಡುಕೊಳ್ಳಬೇಕಿರುವುದು ಈ ದೇಶದಲ್ಲಿ ಕ್ರಾಂತಿ ಏಕೆ ಸಂಭವಿಸುತ್ತಿಲ್ಲ ಅನ್ನುವುದನ್ನು. ಉತ್ತರ ಕಂಡುಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ ಅಂದರೆ ಚೆ ನೆನಪಿಸಿಕೊಂಡು ಏನು ಪ್ರಯೋಜನವಿಲ್ಲ.

---

ಲೋಹಿಯಾರ 'ನಿರಾಸೆಯ ಕಾಲದ ಕರ್ತವ್ಯಗಳು' ಲೇಖನ ಓದಿ ಮುಗಿಸಿದ ಮೇಲೆ ನನಗೆ ನೆನಪಿಗೆ ಬಂದವರು ದೊಮ್ಮಲೂರು ಶ್ರೀನಿವಾಸ್ ಕನ್ನಡ ಸೇವಕ ರವರು. ಲೋಹಿಯಾ ಆ ಲೇಖನದಲ್ಲಿ ಇಂಗ್ಲಿಷ್ ಬೋರ್ಡ್ ಗಳನ್ನು ತೆರವುಗೊಳಿಸುವುದು ಭಾಷಾ ಹೋರಾಟದ ಒಂದು ಭಾಗ ಎಂದು ಹೇಳುತ್ತಾರೆ. ಇಂತಹ ಒಂದು ಹೋರಾಟವನ್ನು ಶ್ರೀನಿವಾಸ್ ಮತ್ತು ರಾಜಣ್ಣ ನಂತಹವರು ಮಾಡುತ್ತಿರುವುದು ಶ್ಲಾಘನೀಯ. ಇವರುಗಳು ಇಂಗ್ಲಿಷ್ ಮತ್ತು ಹಿಂದಿ ಬೋರ್ಡ್ ತೆರವುಗೊಳಿಸುವ ಹಲವಾರು ಲೈವ್ ಗಳನ್ನು ನಾನು ನೋಡಿದ್ದೇನೆ. ಬಲಿಷ್ಠ ಕರ್ನಾಟಕ ಕಟ್ಟುವ ಕನಸಿನೊಂದಿಗೆ ದುಡಿಯುವ ಇಂತಹವರನ್ನು ನಾವುಗಳು ಗೌರವಿಸಬೇಕು.

---

ಮೊನ್ನೆ ವಿ ಎಲ್ ನರಸಿಂಹಮೂರ್ತಿ ಈ ಲೇಖನವನ್ನು ಜ್ಞಾಪಿಸಿದರು. ಮರುಓದು ಬಹಳ ಮುಖ್ಯವಾದ ಸಂಗತಿ.
ಜನರು V/S ಮಂದಿಯಾಳ್ವಿಕೆ, Populist ರಾಜಕಾರಣ, ಒಮ್ಮತವನ್ನು ಉತ್ಪಾದಿಸಿ ದೇಶದ ಜನರನ್ನು ತಮ್ಮ ತಾಳಕ್ಕೆ ಕುಣಿಸುತ್ತಿರುವ ಕಾಲದಲ್ಲಿ ನಿರಾಸೆ ಮೂಡುವುದು ಸಹಜ. ಆದರೆ ಇಂತಹ ಲೇಖನಗಳ ಮರುಓದಿನಿಂದ ಮತ್ತೊಮ್ಮೆ ನಮ್ಮ ರಾಜಕೀಯ ಕರ್ತವ್ಯಗಳು ಏನು ಅನ್ನುವುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ನೀವುಗಳು ಓದಿಲ್ಲ ಅಂದರೆ ಓದಿ, ಈಗಾಗಲೇ ಓದಿದ್ದರೆ ಮತ್ತೊಮ್ಮೆ ಓದಿ. ನನ್ನ ಅಭಿಪ್ರಾಯದಲ್ಲಿ ಈ ಲೇಖನದಲ್ಲಿ ಇರುವ ಒಂದಷ್ಟು ವಿಚಾರಗಳನ್ನು ಮತ್ತಷ್ಟು ವಿಮರ್ಶೆಗೆ ಒಳಪಡಿಸಬೇಕು. ಆದರೆ ಲೇಖನದ ಆಶಯಕ್ಕೆ ನನ್ನ ಯಾವ ತಕರಾರು ಇಲ್ಲ.

- ನಾಗೇಗೌಡ ಕೆ ಎಸ್

ಡಾ. ಮುಜಾಫರ್ ಅಸ್ಸಾದಿ ಅವರ 'ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ: ಕಥನಗಳು ಮತ್ತು ಚಳವಳಿ' ಕೃತಿ ಕುರಿತು ಎನ್ ಡಿ ತಿಪ್ಪೇಸ್ವಾಮಿ ಅವರ ಅನಿಸಿಕೆ...
14/06/2026

ಡಾ. ಮುಜಾಫರ್ ಅಸ್ಸಾದಿ ಅವರ 'ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ: ಕಥನಗಳು ಮತ್ತು ಚಳವಳಿ' ಕೃತಿ ಕುರಿತು ಎನ್ ಡಿ ತಿಪ್ಪೇಸ್ವಾಮಿ ಅವರ ಅನಿಸಿಕೆ...

*

ಕರ್ನಾಟಕದ ಸ್ತ್ರೀವಾದದ ಬಗ್ಗೆ ಬರೆದಿರುವ ಈ ಕೃತಿ, ಸ್ತ್ರೀವಾದವನ್ನು ತುಂಬಾ ಚರ್ಚೆಗೆ ಒಳಪಡಿಸಿದೆ.

ಸ್ರೀವಾದವನ್ನು ಬಹಳ ವಿಭಿನ್ನ ನೋಟದಿಂದ ನೋಡಿ ಏಳು ಅಧ್ಯಾಯಗಳಲ್ಲಿ ಕಟ್ಟಿಕೊಟ್ಟಿರುವ ನೋಟ, ಹಿಂದೆ ಆಗಿರುವ ಅಧ್ಯಯನಗಳಿಗಿಂತ ಅರ್ಥಪೂರ್ಣವಾಗಿದೆ.

ಅಸ್ಸಾದಿಯವರ ವಿಚಾರ ವಾದವನ್ನು ಎಲ್ಲರೂ ಒಪ್ಪಬೇಕಾಗಿದೆ.

ಡಾ.ಎಚ್.ಎಸ್.ಶ್ರೀಮತಿಯವರು ಕೂಡ ಹಿಂದೆ ಹಂಪಿ ವಿವಿಯಲ್ಲಿ ಇದ್ದಾಗ ಸ್ತ್ರೀವಾದದ ಬಗ್ಗೆ ತುಂಬಾ ಉತ್ತಮ ಕೃತಿಗಳನ್ನು ತಂದಿದ್ದರು. ಈಗ ಪ್ರೊ.ಅಸ್ಸಾದಿಯವರ ಈ ಪುಸ್ತಕ ಹೊಸ ಮಾದರಿಯಲ್ಲಿ ಬಂದಿದೆ.

- ಎನ್ ಡಿ ತಿಪ್ಪೇಸ್ವಾಮಿ

14-6-2021

*

'ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ: ಕಥನಗಳು ಮತ್ತು ಚಳವಳಿ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/-03bf0

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

"ನಡುಬಗ್ಗಿಸಿ ಬದುಕುವುದಕ್ಕಿಂತ ನೇರ ನಿಂತು ಸಾಯುವುದು ಮೇಲು", "ಪ್ರತಿ ಅನ್ಯಾಯದ ವಿರುದ್ಧವೂ ನೀನು ಸಿಡಿದೇಳುವುದಾದಲ್ಲಿ ನಾನು ನಿನ್ನ ಸಂಗಾತಿ",...
14/06/2026

"ನಡುಬಗ್ಗಿಸಿ ಬದುಕುವುದಕ್ಕಿಂತ ನೇರ ನಿಂತು ಸಾಯುವುದು ಮೇಲು", "ಪ್ರತಿ ಅನ್ಯಾಯದ ವಿರುದ್ಧವೂ ನೀನು ಸಿಡಿದೇಳುವುದಾದಲ್ಲಿ ನಾನು ನಿನ್ನ ಸಂಗಾತಿ", "ನಿಜವಾದ ಕ್ರಾಂತಿಕಾರಿಯ ಮಾರ್ಗದರ್ಶಿ ಪ್ರೀತಿಯೇ ಆಗಿರುತ್ತದೆ" ಎಂದ ಚೆಗೆವಾರನ ಜನ್ಮದಿನ ಇಂದು.

ಇಂದಿಗೂ ಜಗತ್ತಿನಾದ್ಯಂತ ಅಸಂಖ್ಯ ಜನರನ್ನು ಸೆಳೆಯುವ ಹೆಸರು ಚೆ. 'ಚೆ-ಕ್ರಾಂತಿಯ ಸಹಜೀವನ-ಫಿಡೆಲ್ ಕ್ಯಾಸ್ಟ್ರೋ ನೆನಪಿನಿಂದ' (ಚೆಗೆವಾರನ ಕುರಿತು ಕ್ಯಾಸ್ಟ್ರೋ ಮಾಡಿದ ಭಾಷಣಗಳು, ಬರೆದ ಲೇಖನಗಳು, ನೀಡಿದ ಸಂದರ್ಶನಗಳ ಸಂಗ್ರಹ), 'ಮೋಟಾರ್ ಸೈಕಲ್ ಡೈರಿ' (ದಕ್ಷಿಣ ಅಮೇರಿಕ ರಾಷ್ಟ್ರಗಳ ಸುತ್ತಾಟದಲ್ಲಿ ಹರಯದ ಹುಡುಗ ಚೆ ಕ್ರಾಂತಿಕಾರಿಯಾಗುವ ಅವನದೇ ಪ್ರವಾಸ ಕಥನ) ಮತ್ತು 'ಚೆಗೆವಾರನ ನೆಲದಲ್ಲಿ' (ಡಾ.ಎಚ್.ಎಸ್.ಅನುಪಮಾ ಅವರು ಬರೆದಿರುವ ಬ್ರೆಜಿಲ್, ಅರ್ಜೆಂಟೀನಾ, ಚಿಲಿ ಹಾಗು ಪೆರು ದೇಶಗಳ ಪ್ರವಾಸ ಕಥನಗಳನ್ನು ಒಳಗೊಂಡಿರುವ ಕೃತಿ) ಚೆಗೆವಾರನ ಕುರಿತು ಅರಿಯಲು ಬಯಸುವವರು ಓದಬಹುದಾದ ಪುಸ್ತಕಗಳು.

ರಹಮತ್ ತರೀಕೆರೆ ಅವರ ಆತ್ಮಕಥನ 'ಕುಲುಮೆ' ಕುರಿತು ಸಿದ್ಧಾಪುರ ಶಿವಕುಮಾರ್ ಅವರ ಟಿಪ್ಪಣಿ...* * *ಮೊದಲಿಗೆ ನನ್ನ ಸೆಳೆದಿದ್ದು "ಕುಲುಮೆ" ಶೀರ್ಷಿ...
13/06/2026

ರಹಮತ್ ತರೀಕೆರೆ ಅವರ ಆತ್ಮಕಥನ 'ಕುಲುಮೆ' ಕುರಿತು ಸಿದ್ಧಾಪುರ ಶಿವಕುಮಾರ್ ಅವರ ಟಿಪ್ಪಣಿ...

* * *

ಮೊದಲಿಗೆ ನನ್ನ ಸೆಳೆದಿದ್ದು "ಕುಲುಮೆ" ಶೀರ್ಷಿಕೆ ಮತ್ತು ಮುಖಪುಟದ ಸಹಜ ಫೋಟೋ. ಮುಂದಿನ ಪುಟಗಳು ಸೃಜನಶೀಲವಾಗಿವೆ ಎಂದು ನಂಬಲು ಇಷ್ಟು ಸಾಕಾಗಿತ್ತು. ಕುಲುಮೆ ಪುಸ್ತಕ ತರಿಸಿಕೊಂಡೆ. ತೆರೆದು ಓದಲು ಶುರು ಮಾಡಿದೆ. ಲೇಖಕ ರಹಮತ್ ತರೀಕೆರೆಯವರ ಬರಹ ಶೈಲಿ ಮೊದಲಿಗೆ ಹಿಡಿದಿಟ್ಟುಕೊಂಡಿತು. ತನಗಾದ ಅನುಭವಗಳನ್ನು ರಸವತ್ತಾಗಿ ಹಂಚಿಕೊಳ್ಳುವುದು ಅವರಿಗೆ ಸಿದ್ಧಿಸಿದೆ ಎಂದು ತಿಳಿಯಲು ಬಹಳ ಸಮಯ ಬೇಕಾಗುವುದಿಲ್ಲ.

ರಹಮತ್ ರ ಬದುಕಿನ ಹುಡುಗಾಟ ಹುಡುಕಾಟ ಹೋರಾಟದಿಂದ ಅವರೊಳಗೊಬ್ಬ ಸೃಜನಶೀಲ ವಿಮರ್ಶಕ, ಲೇಖಕ ಹುಟ್ಟಿಕೊಂಡಿದ್ದಾನೆ. ಹೀಗಾಗಿ ಮಾಗಿಸಿದ ಬದುಕಿನಿಂದಾಗಿ ಮೊದಲ ನೋಟಕ್ಕೆ ಗಂಭೀರ ವ್ಯಕ್ತಿಯಂತೆ ಕಾಣುವುದು ನಿಜ. ಆದರೆ ಅವರೊಳಗೊಬ್ಬ ಪರಮ ಚೇಷ್ಟೆಯ ಚತುರ ಅಡಗಿದ್ದಾನೆ. ಈತ ಓದುಗನ ಮುಖದಲ್ಲಿ ನಗು ಚೆಲ್ಲಿಸದೆ ಬಿಡಲಾರ! ‌ಓದುಗನ ಒಂಟಿತನದಲ್ಲೂ ಆತನ ಮೊಗದಿಂದ ಪಕ್ಕನೆ ನಗು ಉಕ್ಕಿಸುವ ಕೌಶಲವನ್ನು ಕರಗತ ಮಾಡಿಕೊಂಡಿದ್ದಾರೆ ರಹಮತರು. ಯಾವುದೋ ಹಾಸ್ಯ ನಾಟಕದ ದೃಶ್ಯಗಳೆಂಬಂತೆ, ಪಾತ್ರಗಳ ಅಭಿವ್ಯಕ್ತಿ ದೃಶ್ಯರೂಪಕಗಳನ್ನು ಸಹಜವಾಗಿ ಹೆಣೆದು ಕೊಟ್ಟಿದ್ದು ಲೇಖಕರ ತಾಕತ್ತಿಗಿಡಿದ ಕನ್ನಡಿ.

ಅಗಾಧ ಜ್ಞಾನ ಮತ್ತು ಗಂಭೀರ ಅನುಭವಗಳಿದ್ದರೂ ಬಹುತೇಕ ಲೇಖಕರು ತಮ್ಮ ಬರಹದಲ್ಲಿ ಅವುಗಳ ಕುರಿತು ಹೇಳುವಾಗ ನಿರಾಸೆ ಉಂಟುಮಾಡಿ ಬಿಡುತ್ತಾರೆ. ಆದರೆ ಕುಲುಮೆಯಲ್ಲಿನ ಲೇಖಕರು ಚಂದವಾಗಿ ಬೆಂದಿದ್ದಾರೆ. ಕೆಂಪಾದ ಬೆಂಕಿಯಿಂದ ಕಾದ ಅನುಭವಗಳನ್ನು ಹದವಾಗಿ ಲೇಖನಿಯ ಸುತ್ತಿಗೆಯಿಂದ ತಮಗೆ ಬೇಕಾದ ಆಕಾರಕ್ಕೆ ತಿದ್ದಿಕೊಂಡಿದ್ದು ಕಾಣಸಿಗುತ್ತ ಹೋಗುತ್ತದೆ. ಈ ಹಿನ್ನೆಲೆಯ ರಾಗ ಆಲಾಪಗಳು ತಂಪಾಗಿ ಓದುಗನೆದೆಗೆ ತಟ್ಟದೇ ಇರುವುದಿಲ್ಲ. ತನಗೆ ತಾನೇ ಓದಿಸಿಕೊಂಡು ಸಾಗುವ ನಿರೂಪಣೆಯ ಬಗೆಯೇ ಮನಸ್ಸನ್ನು ಮುದಗೊಳಿಸುತ್ತದೆ. ಲೇಖಕ ರಹಮತ್ ರ ಅನುಭವಗಳನ್ನು ಓದುತ್ತಿದ್ದರೆ, ಬಾಲ್ಯದಲ್ಲೇ ಕಡುಬಡತನ ಅನುಭವಿಸಿದ್ರೆ ಮಾತ್ರ ಇಷ್ಟು ಸೊಗಸಾದ, ರಸವತ್ತಾದ ಸೃಜನಶೀಲ ವ್ಯಕ್ತಿತ್ವ ಅರಳಲು ಸಾಧ್ಯ ಎನಿಸಿಬಿಡುತ್ತದೆ.

ಮನುಷ್ಯನಾಗಿ ಹುಟ್ಟಿದ ನಂತರ ಸಮಾಜದಲ್ಲಿ ಬೇರೂರಿದ ಸಂಪ್ರದಾಯ ಕಟ್ಟುಪಾಡುಗಳಾಚೆಗೆ ಆತನೊಬ್ಬ ವಿವೇಕಿಯಾದರೆ, ಈ ವಿಶಾಲ ಜಗತ್ತಿನೊಳಗೆ ತನ್ನನ್ನು ತಾನು ತೆರೆದುಕೊಳ್ಳುವ ರೀತಿ ಮತ್ತು ಬದುಕಿನ ಪ್ರೀತಿಯನ್ನು ಇಲ್ಲಿನ ಪ್ರತಿ ಪುಟದಲ್ಲೂ ಗ್ರಹಿಸಬಹುದು.

- ಸಿದ್ಧಾಪುರ ಶಿವಕುಮಾರ್

೨೨-೩-೨೦೨೪

* * *

'ಕುಲುಮೆ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://imojo.in/CZF4gk

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಸತೀಶ್ ಜಿ ಟಿ ಹಾಗೂ ಶಶಿ ಸಂಪಳ್ಳಿ ಅವರು ಕನ್ನಡಕ್ಕೆ ಅನುವಾದಿಸಿರುವ ವಿನೋದ್ ಮೆಹ್ತಾ ಅವರ ಆತ್ಮಕತೆ 'ಲಖನೌ ಹುಡುಗ' ಕುರಿತು ಅರುಣ್ ಜೋಳದಕೂಡ್ಲಿಗ...
12/06/2026

ಸತೀಶ್ ಜಿ ಟಿ ಹಾಗೂ ಶಶಿ ಸಂಪಳ್ಳಿ ಅವರು ಕನ್ನಡಕ್ಕೆ ಅನುವಾದಿಸಿರುವ ವಿನೋದ್ ಮೆಹ್ತಾ ಅವರ ಆತ್ಮಕತೆ 'ಲಖನೌ ಹುಡುಗ' ಕುರಿತು ಅರುಣ್ ಜೋಳದಕೂಡ್ಲಿಗಿ ಅವರ ಅನಿಸಿಕೆ...

---

ಮೂರು ತಿಂಗಳ ಹಿಂದೆಯೇ ವಿನೋದ್ ಮೆಹ್ತಾ ಅವರ 'ಲಖನೌ ಹುಡುಗ' ಓದಿದ್ರೂ ಒಂದು ಸಣ್ಣ ಟಿಪ್ಪಣಿಯನ್ನು ಬರೆಯಲಾಗಿರಲಿಲ್ಲ.

ಈ ಪುಸ್ತಕದ ಪ್ರಾಮುಖ್ಯತೆ ಬಗ್ಗೆ ಬಹುಜನರು ಗಮನಸೆಳೆದಿದ್ದಾರೆ. ಬರೆದಿದ್ದಾರೆ, ಮೆಚ್ಚಿದ್ದಾರೆ. ನಾನು ಓದಿದ ಇಂತಹ ಟಿಪ್ಪಣಿಗಳಲ್ಲಿ ಗುರುತಿಸದ ಒಂದು ಸಂಗತಿಯನ್ನು ಮಾತ್ರ ಇಲ್ಲಿ ಹಂಚಿಕೊಳ್ಳುವೆ.

ನಿಜಕ್ಕೂ ವಿನೋದ್ ಮೆಹ್ತಾ ಪ್ರಯೋಗ, ಪ್ರಾಮಾಣಿಕತೆ, ದಿಟ್ಟತನ ಎಂತಹವರನ್ನೂ ಬೆರಗುಗೊಳಿಸುತ್ತವೆ. ಈ ಕಾಲದ ನೀತಿಹೀನ ಮಾಧ್ಯಮದ ಕಣ್ಣೋಟದಲ್ಲಿ ನೋಡಿದಾಗ, ಮೆಹ್ತಾ ಹೇಳುವ ಕೆಲವು ಘಟನೆಗಳಂತೂ ಸಿನಿಮೀಯ ಅನ್ನಿಸುವಷ್ಟು, 'ಸುಳ್ಳು ಹೇಳುತ್ತಾರೇನೋ..' ಎನ್ನುವಷ್ಟು ಅನುಮಾನ ಹುಟ್ಟಿಸುತ್ತವೆ.

ಮುಖ್ಯವಾಗಿ ಈ ಕಾಲದ ಹೊಸ ತಲೆಮಾರು ಇಂದು ನೀಚತೆಯಲ್ಲಿ ಇನ್ನು ಕೆಳಗಿಳಿಯಲು ಸಾಧ್ಯವಿಲ್ಲ ಎನ್ನುವಷ್ಟು ಪಾತಾಳಕ್ಕೆ ತಲುಪಿದ ಬಹುಪಾಲು ಮಾಧ್ಯಮಗಳ ಜನರನ್ನು ಗ್ರಹಿಸಲು ಮೆಹ್ತಾ ಬದುಕು ಒಂದು ಅಳತೆಗೋಲಾಗಿ ನಿಲ್ಲುತ್ತದೆ.

ಎಷ್ಟೇ ಇಂಗ್ಲೀಷ್ ಪ್ರಾವಿಣ್ಯತೆ ಇದ್ದು, ಆತ್ಮಸಾಕ್ಷಿ ಸಾಯದಿದ್ದರೆ, ವೈಯಕ್ತಿಕವಾಗಿ ಭ್ರಷ್ಟರಾಗಿದ್ದವರು ಖಂಡಿತಾ ಈ ಪುಸ್ತಕದ ಅನುವಾದ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕಾರಣ, ಪ್ರತಿ ಪುಟವೂ ಇವರ ಭ್ರಷ್ಟತೆಯನ್ನು ಕೆಣಕಿ ಕೆಣಕಿ ಕೊಲ್ಲುತ್ತಿತ್ತು. ಈ ಕೃತಿಯ ಅನುವಾದಕರಾದ ಸತೀಶ್ ಜಿ.ಟಿ ಮತ್ತು ಶಶಿ ಸಂಪಳ್ಳಿ ವೈಯಕ್ತಿಕ ನೆಲೆಯಲ್ಲಿ ಪ್ರಾಮಾಣಿಕ ಪತ್ರಕರ್ತರಾದ ಒಂದೇ ಒಂದು ಕಾರಣಕ್ಕೆ ಈ ಕೃತಿಗೆ ಜೀವ ತುಂಬಿ‌ ಕನ್ನಡವೇ ಉಸಿರಾಡುವಂತೆ ಅನುವಾದಿಸಿದ್ದಾರೆ. ಇನ್ನೊಂದು ಮಾತನ್ನು ಇಲ್ಲಿಯೇ ಹೇಳಬೇಕು. ತೀರಾ ನೀಚರಾದ ಪತ್ರಕರ್ತರೂ ಈ ಆತ್ಮಕಥನವನ್ನು ಓದುವ ಸಾಹಸ ಮಾಡಲಾರರೇನೋ... ಕಾರಣ ಓದುವಾಗಲೂ ಅವರ ಆತ್ಮಸಾಕ್ಷಿಯನ್ನು ಈ ಕೃತಿ ಮುಳ್ಳಿನ ಹಾಗೆ ಚುಚ್ಚುತ್ತದೆ.

- ಅರುಣ್ ಜೋಳದಕೂಡ್ಲಿಗಿ

12-6-2020

---

ಅಹರ್ನಿಶಿ ಪ್ರಕಾಶನ ಹೊರತಂದಿರುವ 'ಲಖನೌ ಹುಡುಗ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/lucknow-huduga

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

Address

Vidyanagar
Hassan
573202

Alerts

Be the first to know and let us send you an email when Prajodayaprakashana posts news and promotions. Your email address will not be used for any other purpose, and you can unsubscribe at any time.

Contact The Business

Send a message to Prajodayaprakashana:

Share