Bahuroopi Book Hub

Bahuroopi Book Hub An Independent Book Shop added with a dose of Coffee. The books store offers a good selection of English and Kannada books.

Curated book experience store at Sanjay Nagar in Bengaluru North,
it's a thematic store with an exclusive section for children.

ಬಹುರೂಪಿಯ 'ಮಿಂಚು ಹುಳದ ದಾರಿ' - ಲಲಿತ ಪ್ರಬಂಧಗಳು  ಓದಿ.ಲೇಖಕರು: ಸುಚಿತ್ರಾ ಹೆಗಡೆಬೆನ್ನುಡಿಯ ಸಾಲುಗಳಿಂದ:ಸುಚಿತ್ರಾ ಹೆಗಡೆ ಅವರ ಕವಿತೆಗಳ ರೀ...
13/08/2025

ಬಹುರೂಪಿಯ 'ಮಿಂಚು ಹುಳದ ದಾರಿ' - ಲಲಿತ ಪ್ರಬಂಧಗಳು ಓದಿ.

ಲೇಖಕರು: ಸುಚಿತ್ರಾ ಹೆಗಡೆ

ಬೆನ್ನುಡಿಯ ಸಾಲುಗಳಿಂದ:

ಸುಚಿತ್ರಾ ಹೆಗಡೆ ಅವರ ಕವಿತೆಗಳ ರೀತಿಗೂ, ಪ್ರವಾಸ ಕಥನದ ಹೊಸತನಕ್ಕೂ ಮಾರುಹೋದವರಿಗೆ ಸಿಗುವದು ಈ 'ಮಿಂಚು ಹುಳದ ದಾರಿ'. ಕನ್ನಡ ಲಲಿತ ಪ್ರಬಂಧಗಳ ಲೋಕ ಅಂತಹ ಆಶಾದಾಯಕವೇನೂ ಅಲ್ಲ. ಹಿರಿಯರು ಹಾಕಿಕೊಟ್ಟ ದಾರಿ ಸಂಪನ್ನವಾಗಿದ್ದರೂ ಹೊಸ ತಲೆಮಾರು ಲಲಿತ ಪ್ರಬಂಧಗಳತ್ತ ತಿರುಗಿ ನೋಡುತ್ತಿಲ್ಲ. ಅಂತಹ ಸಂದರ್ಭದಲ್ಲಿ ಸುಚಿತ್ರಾ ಅವರ ಈ ಕೃತಿ ಒಂದೇ ಏಟಿಗೆ ಮನ ಸೆಳೆಯುತ್ತದೆ.

ಸುಚಿತ್ರಾ ಅವರಿಗೆ ಭಾಷೆಯನ್ನು ಹೇಗೆ ಪಳಗಿಸಬೇಕು ಎನ್ನುವುದು ಗೊತ್ತು, ಯಾವಾಗ ಪಂಚ್ ನೀಡಬೇಕು ಎನ್ನುವುದೂ... ಬೇಕೆಂದಾಗ ಕಚಗುಳಿ ಇಡುವ, ಆಗೀಗ ಕಾವ್ಯಮಯವಾಗುವ, ಸದಾ ಹೊಸತನ್ನೇ ಹುಡುಕುವ ಸುಚಿತ್ರಾ ಅವರ ಈ ಕೃತಿಗೆ ಮಹತ್ವದ ಸ್ಥಾನವಿದೆ.

ಬೆಲೆ ₹175/-. ರಿಯಾಯಿತಿ ನಂತರ.₹148.75/-. ನಮ್ಮ ವೆಬ್ಸೈಟ್ ಲಿಂಕಿನಿಂದ ಕೊಳ್ಳಿರಿ:
https://bahuroopi.in/product/minchu-hulada-daari-minchu-hulada-daari/

ವಾಟ್ಸಾಪ್ ಮೂಲಕ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729.

ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/

ಬಹುರೂಪಿಯ 'ಚಾರುವಸಂತ' ಓದಿ. ಇದು ನಾಡೋಜ ಹಂಪನಾ ಅವರ ಕಾವ್ಯಕೃತಿ ಆಧರಿಸಿದ ನಾಟಕ.ಲೇಖಕರು: ಡಾ. ನಾ. ದಾಮೋದರ ಶೆಟ್ಟಿ.ಕೃತಿಯ ಬಗ್ಗೆ ನಾಡೋಜ ಹಂಪನ...
06/08/2025

ಬಹುರೂಪಿಯ 'ಚಾರುವಸಂತ' ಓದಿ. ಇದು ನಾಡೋಜ ಹಂಪನಾ ಅವರ ಕಾವ್ಯಕೃತಿ ಆಧರಿಸಿದ ನಾಟಕ.

ಲೇಖಕರು: ಡಾ. ನಾ. ದಾಮೋದರ ಶೆಟ್ಟಿ.

ಕೃತಿಯ ಬಗ್ಗೆ ನಾಡೋಜ ಹಂಪನಾ ಅವರು ಬರೆದ ಸಾಲುಗಳಿಂದ:

ಅನೇಕ ಪುಸ್ತಕಗಳನ್ನು ಕನ್ನಡ-ಇಂಗ್ಲಿಷಿನಲ್ಲಿ ಬರೆದರೂ ನಾಟಕ ಮತ್ತು ಕಾವ್ಯ ಬರೆದಿರಲಿಲ್ಲ. ಸೇವೆಯಿಂದ ನಿವೃತ್ತಿಹೊಂದಿ ಇಳಿವಯಸ್ಸಿನ ಹೊರಳು ದಾರಿಯಲ್ಲಿ ಬಂದು ನಿಂತ ದಿನಗಳಲ್ಲಿ ಚಾರುದತ್ತನ ಕತೆ ದುಮುದುಮಿಸತೊಡಗಿತು.

ಸಂಸ್ಕೃತ ಕನ್ನಡ ಕಾವ್ಯದಲ್ಲಿ ಅಡಗಿದ್ದ ಚಾರುದತ್ತ ಮತ್ತು ಅವನ ಮಡದಿ, ನಲ್ಲೆ ಪೀಡಿಸತೊಡಗಿದರು. ಕನಸು ಮನಸುಗಳನ್ನೂ ಆವರಿಸಿ ಹೊರಗೆ ಬಿಡುವಂತೆ ಸುಮ್ಮನೆ ಗುಮ್ಮಲಾರಂಭಿಸಿದರು.

ನಾನು ಬರೆದ ಕಾವ್ಯ ಕೃತಿ 'ಚಾರುವಸಂತ'ವನ್ನು ನಮ್ಮ ಪ್ರೀತಿಯ ಡಾ. ನಾ. ದಾಮೋದರ ಶೆಟ್ಟಿ ಅವರು ಸಮರ್ಥವಾಗಿ ನಾಟಕವಾಗಿಸಿದ್ದಾರೆ. ನಾದಾ ಅವರ ಈ ನಾಟಕ ಕೃತಿ ನಿಮಗೆಲ್ಲರಿಗೂ ಮೆಚ್ಚುಗೆಯಾಗುವುದರಲ್ಲಿ ಸಂಶಯವಿಲ್ಲ.

ಬೆಲೆ. ₹170/-. ವಾಟ್ಸಾಪ್ ಮೂಲಕ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729. ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/

ಬಹುರೂಪಿಯ 'ಆಕಾಶಕ್ಕೆ ಏಣಿ ಹಾಕು' ಕವನ ಸಂಕಲನ ಓದಿ.ಲೇಖಕರು: ಡಾ ಎಲ್ ಹನುಮಂತಯ್ಯಸಂಕಲನದ ಬಗ್ಗೆ ಲಕ್ಷ್ಮೀಪತಿ ಕೋಲಾರ  ಅವರು ಬರೆದ ಸಾಲುಗಳಿಂದ:“ಹ...
06/08/2025

ಬಹುರೂಪಿಯ 'ಆಕಾಶಕ್ಕೆ ಏಣಿ ಹಾಕು' ಕವನ ಸಂಕಲನ ಓದಿ.

ಲೇಖಕರು: ಡಾ ಎಲ್ ಹನುಮಂತಯ್ಯ

ಸಂಕಲನದ ಬಗ್ಗೆ ಲಕ್ಷ್ಮೀಪತಿ ಕೋಲಾರ ಅವರು ಬರೆದ ಸಾಲುಗಳಿಂದ:

“ಹನುಮಂತಯ್ಯನವರ ಕವಿತೆಗಳ ವಸ್ತುವಿನ ಆಶಯವು ನಿರ್ವಿವಾದವಾಗಿ ಸಮಾಜವಾದಿ ನಿಲುವುಗಳ, ಸಮಾನತೆಯ ಆಶಯಗಳನ್ನೇ ಪದೇ ಪದೇ ಧ್ವನಿಸುತ್ತಾ ಸಾಗುತ್ತದೆ.

ಸಮಾಜದಲ್ಲಿನ ಕ್ರೌರ್ಯ, ವೈರುಧ್ಯಗಳ ಕುರಿತು ವಿಡಂಬನಾತ್ಮಕವಾಗಿಯೂ ಆರೋಗ್ಯಕರವಾದ, ಆದರೆ ತೀಕ್ಷವಾದ ಟೀಕೆಗಳ ಮೂಲಕವೇ ಪ್ರಶ್ನಿಸುತ್ತ ಓದುಗರನ್ನು ತಣ್ಣಗಿನ ಅತ್ಯಾವಲೋಕನಕ್ಕೆ ಹಚ್ಚುತ್ತದೆ.

ರೊಚ್ಚು, ಆವೇಶಗಳ ಅನಗತ್ಯ ಭಾರವು ಹನುಮಂತಯ್ಯನವರ ಯಾವ ಕವಿತೆಯಲ್ಲೂ ಕಾಣಬರುವುದಿಲ್ಲವೆಂಬುದಂತೂ ಸಮಾಧಾನದ ಅಂಶವಾಗಿದೆ.”

ಬೆಲೆ ₹175/-. ರಿಯಾಯಿತಿ ನಂತರ.₹150/-. ನಮ್ಮ ವೆಬ್ಸೈಟ್ ಲಿಂಕಿನಿಂದ ಕೊಳ್ಳಿರಿ: https://bahuroopi.in/product/aakaashakke-yeni-haaku/

ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/

ವಾಟ್ಸಾಪ್ ಮೂಲಕ ಕೂಡ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729.

Read Bahuroopi's 'Waves of Change - Mapping Trends 2021-30', an analysis of how the development of trends in the world o...
05/08/2025

Read Bahuroopi's 'Waves of Change - Mapping Trends 2021-30', an analysis of how the development of trends in the world of communication impacts everything around it in this decade.

Published by Temple Tree for PRCI.

An excerpt from the book:

One is hesitant to call our times the era of 'digi-civilization because it has arrived suddenly even before millions of people could become barely literate but now are compelled to cope with the con digital technology convenience. The Indian government, by embracing digital technology much more than before, is moving people to the digital platform. The responses of the governments and the people for dealing with the pandemic have set the framework for the unfolding of trends that may define this decade.

The trends as and when they fully roll out during these ten years will impact upon, and be affected by, the country's demographic transition, urbanisation forces, education and training system, and the effects of climate change. These four features form what may be called Metatrends. A brief introduction to these Metatrends will be to map the contours of the mega trends that may roll out during the rest of the third decade of the millennium.

- S Narendra, Editor, PRCI.

MRP. Rs.50/- Get your copy now by contacting us via WhatsApp: 7019182729. (Shipping charges apply).

Visit us at: bahuroopi.in

ಬಹುರೂಪಿಯ 'ಕ್ಯಾಮೆರಾ ಕಣ್ಣಿನಿಂದ ಜರ್ಮನಿ' ಓದಿ.ಲೇಖಕರು: ಡಾ ಬಿ ಎ ವಿವೇಕ ರೈಕೃತಿಯ ಬಗ್ಗೆ ಲೇಖಕರು ಬರೆದ ಸಾಲುಗಳಿಂದ:ಜರ್ಮನಿಯಲ್ಲಿ ಇದ್ದ ಅವಧಿ...
01/08/2025

ಬಹುರೂಪಿಯ 'ಕ್ಯಾಮೆರಾ ಕಣ್ಣಿನಿಂದ ಜರ್ಮನಿ' ಓದಿ.

ಲೇಖಕರು: ಡಾ ಬಿ ಎ ವಿವೇಕ ರೈ

ಕೃತಿಯ ಬಗ್ಗೆ ಲೇಖಕರು ಬರೆದ ಸಾಲುಗಳಿಂದ:

ಜರ್ಮನಿಯಲ್ಲಿ ಇದ್ದ ಅವಧಿಯಲ್ಲಿ ನಾನು ಪ್ರವಾಸ ಮಾಡಿದಾಗಲೆಲ್ಲ ನನಗೆ ಅನನ್ಯ ಎಂದು ಕಂಡವುಗಳನ್ನು ಕೆಮರಾದಲ್ಲಿ ಸೆರೆಹಿಡಿದಿದ್ದೇನೆ. ಕೆಲವನ್ನು ನಾನೇ ಹುಡುಕಿಕೊಂಡು ಹೋಗಿ ದೃಶ್ಯರೂಪದಲ್ಲಿ ದಾಖಲಿಸಿದ್ದೇನೆ. ಬರ್ಲಿನ್‌ನಲ್ಲಿ ರಾಮಮನೋಹರ ಲೋಹಿಯಾ ಅವರು ವಾಸ್ತವ್ಯ ಇದ್ದ ಕಟ್ಟಡಗಳನ್ನು ಶೋಧಿಸಿ ತೆಗೆದ ಫೋಟೋಗಳು ಅಂತಹ ಅಪೂರ್ವ ಮಾದರಿಗಳು. ಹರ್ಮನ್ ಮೋಗ್ಲಿಂಗ್ ಸಮಾಧಿಯ ಫೋಟೋ ಅಂತಹ ಇನ್ನೊಂದು ವಿಶಿಷ್ಟ ದಾಖಲೆ.

ನಾನು ನನ್ನ ಕೆಮರಾದಲ್ಲಿ ಸೆರೆಹಿಡಿದ ಫೋಟೋಗಳಲ್ಲಿ ಆಯ್ದ ಕೆಲವನ್ನು ಈ ಸಂಪುಟದಲ್ಲಿ ಸ್ಥಳ ಮತ್ತು ಸನ್ನಿವೇಶಗಳಿಗೆ ಅನುಸಾರವಾಗಿ ವಿಂಗಡಿಸಿ ಕೊಡಲಾಗಿದೆ. ಜರ್ಮನಿಯ ಋತುಗಳು-ಬೇಸಗೆ, ಶರತ್ಕಾಲ, ಚಳಿಗಾಲ ಮತ್ತು ವಸಂತಕಾಲ- ಇವುಗಳಲ್ಲಿ ನಿಸರ್ಗದಲ್ಲಿ ಆಗುವ ಬದಲಾವಣೆಗಳು ಬಹುರೂಪಿ ದೃಶ್ಯಗಳ ಸೊಬಗನ್ನು ಕೊಡುತ್ತವೆ. ಈ ಋತುಗಳಲ್ಲಿ ಸಂಭವಿಸುವ ಚಟುವಟಿಕೆಗಳು- ಹಬ್ಬಗಳು, ಪ್ರದರ್ಶನಗಳು, ಸಂತೆಗಳು, ಉತ್ಸವಗಳು, ಮನೋರಂಜನೆಗಳು ಬಹು ವೈವಿಧ್ಯಮಯವಾಗಿ ಕಣ್ಮನಗಳಿಗೆ ಆಹ್ಲಾದವನ್ನು ಕೊಡುತ್ತವೆ. ಇವುಗಳಲ್ಲಿ ಪಾಲುಗೊಳ್ಳುವವರ ಕ್ರಿಯೆಗಳು ಮತ್ತು ನಡವಳಿಕೆಗಳು ವಿಶಿಷ್ಟವಾಗಿರುತ್ತವೆ.

ಬೆಲೆ ₹200/-. ರಿಯಾಯಿತಿ ನಂತರ.₹170/-. ನಮ್ಮ ವೆಬ್ಸೈಟ್ ಲಿಂಕಿನಿಂದ ಕೊಳ್ಳಿರಿ: https://bahuroopi.in/product/camera-kannininda-germany/

ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/
ವಾಟ್ಸಾಪ್ ಮೂಲಕ ಕೂಡ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729.

Read 'Communication Perspectives' by MB Jayaram. A collection of articles on Communication by experts in Public Relation...
01/08/2025

Read 'Communication Perspectives' by MB Jayaram. A collection of articles on Communication by experts in Public Relations.

Published by Temple Tree for PRCI.

A note from the author:

Public Relations may sound simple, but it requires significant effort and planning. While the profession is growing in India, there remains a shortage of trained, competent professionals to manage the rising demands of corporate communication strategies.

Realising this, a couple of PR professionals met in Bangalore to give a proper approach to PR by trying their best to standardise the profession and bring professionalism to the PR industry. Hence, PRCI was born.

PR professionals are encouraged to learn from all levels and build communication equality that embraces solidarity with the population. With this in mind, we initiated 'Communication Perspectives' based on our understanding of what the audience wanted to hear, learn, read, and discuss. Diversity in communication, ethics, and good writing remains central to education and practice.

I hope you will join me in welcoming and encouraging this new book, which I place before you humbly.

- M B Jayaram, Chief Mentor & Chairman Emeritus - PRCI.

MRP. Rs.120/- Get your copy now at Rs.102/- for a limited period by contacting us via WhatsApp: 7019182729. (Shipping charges apply).

Visit us at: bahuroopi.in

ಬಹುರೂಪಿಯ 'ಛೂಮಂತ್ರಯ್ಯನ ಕಥೆಗಳು' ಮಕ್ಕಳ ಪುಸ್ತಕ  ಓದಿ.ಲೇಖಕರು: ಕೃಷ್ಣಮೂರ್ತಿ ಬಿಳಿಗೆರೆಕೃತಿಯ ಬಗ್ಗೆ ಲೇಖಕರು ಬರೆದ ಸಾಲುಗಳಿಂದ:ಇಲ್ಲಿನ ಛೂಮ...
01/08/2025

ಬಹುರೂಪಿಯ 'ಛೂಮಂತ್ರಯ್ಯನ ಕಥೆಗಳು' ಮಕ್ಕಳ ಪುಸ್ತಕ ಓದಿ.

ಲೇಖಕರು: ಕೃಷ್ಣಮೂರ್ತಿ ಬಿಳಿಗೆರೆ

ಕೃತಿಯ ಬಗ್ಗೆ ಲೇಖಕರು ಬರೆದ ಸಾಲುಗಳಿಂದ:

ಇಲ್ಲಿನ ಛೂಮಂತ್ರಯ್ಯ ಒಬ್ಬನಲ್ಲ. ಬಹುಜೀವಗಳ ರೂಪಕ. ಕೇವಲ ಮನುಷ್ಯರಲ್ಲ. ಪ್ರಾಣಿ ಪಕ್ಷಿ ಕ್ರಿಮಿ ಕೀಟ ಗಿಡ ಮರ ಬಳ್ಳಿ ಮಳೆ ಗಾಳಿ ಬಿಸಿಲು ಏನೆಲ್ಲವೂ... ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದ ಈ ಕತೆಗಳನ್ನು ದೊಡ್ಡವರೂ ಓದಬಹುದು, ಆದರೆ ಮಕ್ಕಳ ಮಾಂತ್ರಿಕ ಮನಸ್ಸನ್ನು ಧರಿಸಿ ಓದಬೇಕಷ್ಟೆ. ಆಗ ಈ ಕತೆಗಳನ್ನು ಇನ್ನೂ ಓದಲು ಕಲಿಯದ ಪುಟಾಣಿ ಮಕ್ಕಳಿಗೂ ಹೇಳುವುದು ಸಾಧ್ಯವಾಗುತ್ತದೆ. ಮಹಾ ಮೀಡಿಯ ಸ್ಪೋಟದ ಈ ಸವಾಲಿನ ಹೊತ್ತಿನಲ್ಲಿ ಮಕ್ಕಳು ನೆಲದಲ್ಲಿ ಕಾಲೂರುವಂತೆ ಪ್ರೇರೇಪಿಸಲು ಇದು ಅಗತ್ಯ.

ಮಕ್ಕಳಿಗೆಂದು ಈ ಕತೆಗಳನ್ನು ಬರೆಯುವಾಗ ಯಾವ ವಯಸ್ಸಿನ ಮಕ್ಕಳಿಗೆ ಇವು ತಲುಪಬಹುದು ಎಂದು ಚಿಂತೆಯಾದದ್ದು ನಿಜ. ಆದರೆ ಕನ್ನಡವನ್ನು ಓದಲು ಕಲಿತ ಮಕ್ಕಳಿಗೆ ಕೊಟ್ಟು ಓದಿಸಿದಾಗ ಈ ಚಿಂತೆ ದೂರವಾಗಿ ಮತ್ತಷ್ಟು ಈ ಬಗೆಯ ಕತೆಗಳನ್ನು ರೂಪಿಸತೊಡಗಿದೆ. ಹೀಗಾಗಿ ಹದಿಹರಯದ ಮಕ್ಕಳಿಗೆ ನೇರವಾಗಿ ಸಲ್ಲುತ್ತವೆಂದೂ, ದೊಡ್ಡವರು ಪುಟಾಣಿ ಮಕ್ಕಳಿಗೂ ತಲುಪುವಂತೆ ಇಲ್ಲಿನ ಕತೆಗಳನ್ನು ಓದಿ ಹೇಳಬಹುದೆಂದೂ ಭಾವಿಸಿ ಪ್ರಕಟಿಸುತ್ತಿದ್ದೇನೆ.

ಬೆಲೆ ₹140/-. ರಿಯಾಯಿತಿ ನಂತರ.₹130/-. ನಮ್ಮ ವೆಬ್ಸೈಟ್ ಲಿಂಕಿನಿಂದ ಕೊಳ್ಳಿರಿ: https://bahuroopi.in/product/choomantrayyana-kathegalu-choomantrayyana-kategalu/

ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/
ವಾಟ್ಸಾಪ್ ಮೂಲಕ ಕೂಡ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729.

ಬಹುರೂಪಿಯ 'ಹೌಸ್‌ಫುಲ್' - ಕನ್ನಡ ನಾಟಕಗಳಿಗೆ ಒಂದು ಕನ್ನಡಿ ಓದಿ.ಲೇಖಕರು: ಕಿರಣ್ ಭಟ್ಕೃತಿಯ ಬಗ್ಗೆ ಮಂಗಳಾ.ಎನ್ ಅವರು ಬರೆದ ಸಾಲುಗಳಿಂದ:ವಿಮರ್ಶ...
01/08/2025

ಬಹುರೂಪಿಯ 'ಹೌಸ್‌ಫುಲ್' - ಕನ್ನಡ ನಾಟಕಗಳಿಗೆ ಒಂದು ಕನ್ನಡಿ ಓದಿ.

ಲೇಖಕರು: ಕಿರಣ್ ಭಟ್

ಕೃತಿಯ ಬಗ್ಗೆ ಮಂಗಳಾ.ಎನ್ ಅವರು ಬರೆದ ಸಾಲುಗಳಿಂದ:

ವಿಮರ್ಶೆಯ ರೂಪು ರೇಷೆ, ಅವುಗಳ ಮಾನದಂಡ, ವ್ಯಾಕರಣ ಇವುಗಳ ಗೊಡವೆಗೇ ಹೋಗದೇ ಕಿರಣಭಟ್ಟರು ತಾವು ನೋಡಿದ ನಾಟಕಗಳ ಕುರಿತಂತೆ ಮಾತನಾಡುತ್ತಾರೆ. ತಾವು ಆ ನಾಟಕಗಳನ್ನು ನೋಡಬೇಕೆಂದು ಆಶಿಸುತ್ತಿದ್ದ ಹೊತ್ತಿನ ಚಡಪಡಿಕೆಯಿಂದ ಹಿಡಿದು, ನೋಡಲು ಹೊರಡುವಾಗಿನ ಸಂಭ್ರಮ, ನೋಡಲು ಹೋದಾಗ ಅಲ್ಲಿಯ ಸುತ್ತಮುತ್ತಲಿನ ಒಟ್ಟೂ ವಾತಾವರಣ, ಪರಿಸರದ ಬಗ್ಗೆ ಸೂಚ್ಯ ವಿವರಗಳನ್ನು ನೀಡುತ್ತಲೇ ನಮ್ಮನ್ನು ನಾಟಕ ನೋಡಲು ಕರೆದುಕೊಂಡು ಹೋಗುವರು. ಇದಲ್ಲದೆ ಒಳಗೆ ಹೋಗಿ, ನಾಟಕ ನೋಡಿ ಬಂದ ನಂತರದ ಅನುಭೂತಿಯವರೆಗೂ ತಮ್ಮ ಅನುಭವದ ಮೂಸೆಯಲ್ಲಿ ತಮ್ಮ ಅನಿಸಿಕೆಯನ್ನು, ಅನುಭವವನ್ನು, ನಾಟಕದ ಕುರಿತು, ರಂಗಮಂದಿರ, ವೇದಿಕೆಯ ಕುರಿತು, ಸಂಘಟಿಸಿದ ಸಂಘಟನೆಯ ಕುರಿತು, ತುಂಬಿದ ಪ್ರೇಕ್ಷಾಂಗಣದ ಕುರಿತು ಮಾತನಾಡುತ್ತಾರೆ. ಮತ್ತು ನಾಟಕ ನೋಡದವರಿಗೆ ನಾಟಕ ನೋಡಬೇಕೆನ್ನುವ ಪ್ರೀತಿ ಹುಟ್ಟಿಸುತ್ತಾರೆ.

ನಿರ್ದೇಶಕರ ಪರಿಚಯ, ತಂಡಗಳ ವೈಶಿಷ್ಟ್ಯತೆ, ಹೊಸಬರ ಸಾಹಸ, ಸಂಘಟಿಸಿದ ಊರು, ಊರಿನ ಗುಣ, ಜನ, ಅವರ ಶಕ್ತಿ ಸಾಮರ್ಥ, ಆ ಊರಿಗಿರುವ ಸಂಪನ್ಮೂಲಗಳು, ಅವುಗಳ ಮಿತಿಗಳು, ನಾಟಕಗಳ ಶೈಲಿಗಳ ಬಗ್ಗೆ, ನಾಟಕದ ವಿಷಯದ ಬಗ್ಗೆ, ಮಹತ್ವದ ತಾಂತ್ರಿಕ ವಿವರಗಳಿದ್ದರೆ ಅವುಗಳ ಬಗ್ಗೆ, ಅನುವಾದ ಮತ್ತು ಅವುಗಳ ಪ್ರಸ್ತುತತೆ- ಎಲ್ಲವೂ ಅವರು ಹಂಚಿಕೊಳ್ಳಲು ಬಯಸುವ ವಿಷಯವಾಗಿರುತ್ತದೆ.

ಬೆಲೆ ₹175/-. ವಾಟ್ಸಾಪ್ ಮೂಲಕ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729.

ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/

ಬಹುರೂಪಿಯ 'ರಂಗ ಸುನೇರಿ' - ರಂಗ ಜಗತ್ತಿಗೆ ಇಣುಕು ನೋಟ ಓದಿ.ಲೇಖಕರು: ಮಹಿಪಾಲರೆಡ್ಡಿ ಮುನ್ನೂ‌ರ್ಕೃತಿಯ ಬಗ್ಗೆ ಬೆನ್ನುಡಿಯ ಸಾಲುಗಳಿಂದ:ರಂಗ ಸಂಗ...
01/08/2025

ಬಹುರೂಪಿಯ 'ರಂಗ ಸುನೇರಿ' - ರಂಗ ಜಗತ್ತಿಗೆ ಇಣುಕು ನೋಟ ಓದಿ.

ಲೇಖಕರು: ಮಹಿಪಾಲರೆಡ್ಡಿ ಮುನ್ನೂ‌ರ್

ಕೃತಿಯ ಬಗ್ಗೆ ಬೆನ್ನುಡಿಯ ಸಾಲುಗಳಿಂದ:

ರಂಗ ಸಂಗದಲ್ಲಿ..

ಕಲ್ಯಾಣ ಕರ್ನಾಟಕದ ರಂಗಭೂಮಿಯ ಮಾತು ಬಂದಾಗಲೆಲ್ಲಾ ಮಹಿಪಾಲರೆಡ್ಡಿ ಮುನ್ನೂರು ಅವರನ್ನು ದಾಟಿಕೊಂಡೇ ಮುಂದೆ ಹೋಗಬೇಕು. ಏಳು ಸಮುದ್ರ ದಾಟಿ, ಏಳು ಕೋಟೆ ದಾಟಿ ಅಲ್ಲಿನ ಮರದ ಮೇಲಿರುವ ಗಿಣಿಯ ಕೊರಳಿನಲ್ಲಿ ಹೇಗೆ ಜೀವವಿದೆ ಎನ್ನುತ್ತಾರೋ ಹಾಗೆ ಮಹಿಪಾಲರೆಡ್ಡಿ ಅವರು ದಶಕಗಳ ಕಾಲ ಪತ್ರಿಕೆ, ಟಿವಿ ಚಾನಲ್‌ಗಳಲ್ಲಿ ಕೆಲಸ ಮಾಡಿದರೂ ಅವರ ಜೀವಾನುಜೀವವಿರುವುದು ರಂಗಭೂಮಿಯಲ್ಲಿ. ಇಂದಿಗೂ ಹವ್ಯಾಸಿ- ವೃತ್ತಿ ಎರಡೂ ನಾಟಕಗಳಲ್ಲಿ ಅಭಿನಯಿಸುತ್ತಾ, ರಂಗ ಉತ್ಸವಗಳನ್ನು ಸಂಘಟಿಸುತ್ತಾ ಇರುವ ಮಹಿಪಾಲರೆಡ್ಡಿ ಅವರದ್ದು ಚಿಕಿತ್ಸಕ ನೋಟ.

ರಂಗಭೂಮಿಯ ಹಲವರ ಒಡನಾಟದಲ್ಲಿ ಇವರು ಕಂಡದ್ದನ್ನು 'ರಂಗ ಸುನೇರಿ'ಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ರಂಗಭೂಮಿಯ ಚರಿತ್ರೆಗೆ ಮುಖ್ಯ ಸೇರ್ಪಡೆ.

ಬೆಲೆ ₹175/-. ವಾಟ್ಸಾಪ್ ಮೂಲಕ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729. ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/

ಬಹುರೂಪಿಯ 'ದಡವ ನೆಕ್ಕಿದ ಹೊಳೆ'- ರಂಗ ಪಯಣದ ಕಥನ ಓದಿ.ಲೇಖಕರು: ಡಾ ಶ್ರೀಪಾದ ಭಟ್ಕೃತಿಯ ಬಗ್ಗೆ ಲೇಖಕರು ಬರೆದ ಸಾಲುಗಳಿಂದ:ನನ್ನಂತಹ ಹಲವರನ್ನು ರ...
01/08/2025

ಬಹುರೂಪಿಯ 'ದಡವ ನೆಕ್ಕಿದ ಹೊಳೆ'- ರಂಗ ಪಯಣದ ಕಥನ ಓದಿ.

ಲೇಖಕರು: ಡಾ ಶ್ರೀಪಾದ ಭಟ್

ಕೃತಿಯ ಬಗ್ಗೆ ಲೇಖಕರು ಬರೆದ ಸಾಲುಗಳಿಂದ:

ನನ್ನಂತಹ ಹಲವರನ್ನು ರೂಪಿಸಿದ ರಂಗ ಚಿಂತನೆಗಳು ಯಾವುದಿರಬಹುದು? ಈ ಮಣ್ಣಿನೊಳಗಡಗಿದ ಯಾವ ನೆಲಮೂಲ ಸಂಗತಿಗಳು ನನ್ನ ರಂಗ ಚಿಂತನೆಗಳನ್ನು ರೂಪಿಸಿರಬಹುದು ಎಂಬ ಒರತೆಗಳ ಹುಡುಕಾಟದ ಯತ್ನ. ಯಾವ ಘಟನೆಗಳು ರಂಗಭೂಮಿಯ ಆಸಕ್ತರಿಗೆ ನೆರವು ನೀಡಬಹುದು ಅಂತ ನನಗನ್ನಿಸಿದೆಯೋ ಅಂತವನ್ನು ಮಾತ್ರ ದಾಖಲಿಸಲು ಯತ್ನಿಸಿದ್ದೇನೆ. ಒಟ್ಟೂ ರಂಗಕ್ರಿಯೆಯ ಪರಿಸರ, ಸಂದರ್ಭವನ್ನು ಕುರಿತು, ಬಣ್ಣದ ಹೆಜ್ಜೆಗಳು ಮೂಡಿದ ಒದ್ದೆಮಣ್ಣಿನ ನೆಲದ ಹಾದಿಯ ಕುರಿತು ಬರೆದಿರುವೆ. ನನ್ನ ರಂಗಬದುಕಿನಲ್ಲಿ 'ಕಲೆಯ ಜಗತ್ತಿನ ಕುರಿತ ಕಥನವಿದೆಯೇ' ಎಂದು ಹುಡುಕಿ ಕೆಲವನ್ನು ಬರೆದಿರುವೆ. ಇಲ್ಲಿ ಅಂಕಣದ ನೆವದಿಂದ ಇಷ್ಟು ದಿನ ನಾನು ಆಡಿದ ಮಾತುಗಳನ್ನು ನಾನೂ ಕೇಳಿಸಿಕೊಂಡಿರುವೆ. ರಂಗ ತಾತ್ವಿಕತೆಗೆ ಸಂಬಂಧಪಟ್ಟ ಮಾತುಗಳು ಅವು ಉಪದೇಶಕ್ಕೆ ಹೇಳಿದುವಲ್ಲ. ನನಗೆ ನಾನೇ ಖಾತ್ರಿಪಡಿಸಿಕೊಂಡ ನುಡಿಗಳವು.

ಬೆಲೆ ₹200/-. ರಿಯಾಯಿತಿ ನಂತರ.₹170/-. ನಮ್ಮ ವೆಬ್ಸೈಟ್ ಲಿಂಕಿನಿಂದ ಕೊಳ್ಳಿರಿ: https://bahuroopi.in/product/dadava-nekkida-hole-dr-shripad-bhat/

ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/
ವಾಟ್ಸಾಪ್ ಮೂಲಕ ಕೂಡ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729

ಬಹುರೂಪಿಯ 'ಮಾಧ್ಯಮ ಲೋಕದ ಅಮೃತ ಬೀಜ' ಓದಿ.ಲೇಖಕರು: ಶಿವಾನಂದ ತಗಡೂರುಕೃತಿಯ ಬಗ್ಗೆ ಶಿವಾನಂದ ತಗಡೂರು ಅವರು ಬರೆದ ಸಾಲುಗಳಿಂದ:ಸ್ವಾತಂತ್ರ್ಯ ಹೋರ...
29/07/2025

ಬಹುರೂಪಿಯ 'ಮಾಧ್ಯಮ ಲೋಕದ ಅಮೃತ ಬೀಜ' ಓದಿ.

ಲೇಖಕರು: ಶಿವಾನಂದ ತಗಡೂರು

ಕೃತಿಯ ಬಗ್ಗೆ ಶಿವಾನಂದ ತಗಡೂರು ಅವರು ಬರೆದ ಸಾಲುಗಳಿಂದ:

ಸ್ವಾತಂತ್ರ್ಯ ಹೋರಾಟಕ್ಕೆ ದುಡಿದ ವ್ಯಕ್ತಿಗಳು, ಪಕ್ಷಗಳು, ಸಂಘಟನೆಗಳು ಪತ್ರಿಕೆಗಳನ್ನು ಆರಂಭಿಸಿದ್ದು ದೌರ್ಜನ್ಯದ ವಿರುದ್ಧ ಹೋರಾಡಲು, ಸ್ವಾತಂತ್ರ್ಯವನ್ನು ತಂದು ಕೊಡಲು. ಈ ಹೋರಾಟದ ಪ್ರತೀ ಮಾಹಿತಿಯನ್ನು ಜನರಿಗೆ ತಲುಪಿಸಲು, ಅವರನ್ನು ಇನ್ನಷ್ಟು ಹೋರಾಟಕ್ಕೆ ತಯಾರು ಮಾಡಲು ಪತ್ರಿಕೆಗಳು ಸೇತುವೆಗಳಾಗಿದ್ದವು.

ಈ ಎಲ್ಲವನ್ನೂ ನೆನಪಿಸಿಕೊಂಡ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ಪತ್ರಿಕೋದ್ಯಮದ ಈ ಅಶಯಗಳೊಂದಿಗೆ ಹೆಜ್ಜೆ ಹಾಕಿದ ಹಿರಿಯರನ್ನು ನೆನಪಿಸಿಕೊಳ್ಳಬಾರದೇಕೆ? ಎಂದು ಯೋಚಿಸಿದೆವು. ನಮ್ಮ ಆಲೋಚನೆ ಇದ್ದದ್ದು ಅಮೃತ ಮಹೋತ್ಸವದ ಹೊತ್ತಲ್ಲಿ 75 ವಸಂತಗಳನ್ನು ಕಂಡ ಮಹನೀಯ ಪತ್ರಕರ್ತರನ್ನು ಗೌರವಿಸಬೇಕು ಎಂದು. ಅವರ ಜೊತೆ ಅವರು ಪತ್ರಿಕೋದ್ಯಮ ಪ್ರವೇಶಿಸಿದ್ದು ಯಾಕಾಗಿ? ಅವರು ಸಾಧಿಸಿದ್ದು ಏನು? ಅವರು ಕಂಡ ಪತ್ರಿಕೋದ್ಯಮ ಹೇಗಿತ್ತು ಎನ್ನುವ ಪ್ರಶ್ನೆಗಳನ್ನು ಮುಂದು ಮಾಡಿ ಪತ್ರಿಕೋದ್ಯಮದ ಹಿರಿಮೆಯನ್ನು ಎಲ್ಲರಿಗೂ ತಿಳಿಸುವ ಆಲೋಚನೆ ಅದಾಗಿತ್ತು.

ಇಲ್ಲಿರುವ ಹಿರಿಯರು ಎಲ್ಲರಿಗೂ ಪರಿಚಯವಾಗಬೇಕು ಎನ್ನುವ ಆಶಯ ನನ್ನದು.

ಬೆಲೆ ₹200/-. ವಾಟ್ಸಾಪ್ ಮೂಲಕ ಪುಸ್ತಕ ಕೊಳ್ಳಬಹುದು, ಸಂಪರ್ಕಿಸಿ: 7019182729.

ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ: https://bahuroopi.in/shop/

Address

N0. 1, Naaku Tanti, Opposite To Udupi Garden Restaurant, RMV 2nd Stage, Basappa Layout, Sanjaynagar
Bangalore
560094

Opening Hours

Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 9pm
Sunday 10am - 9pm

Telephone

+917019182729

Alerts

Be the first to know and let us send you an email when Bahuroopi Book Hub posts news and promotions. Your email address will not be used for any other purpose, and you can unsubscribe at any time.

Contact The Business

Send a message to Bahuroopi Book Hub:

Share

Category