Basavaraj Sannakki

Basavaraj Sannakki Contact information, map and directions, contact form, opening hours, services, ratings, photos, videos and announcements from Basavaraj Sannakki, Book shop, Laggere.

ಹಿಂದುಳಿದವರ ಏಳಿಗೆಗೆ ಹಗಲಿರುಳು ಶ್ರಮಿಸಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ಅವರಿಗೆ ಅನಂತಕೋಟಿ ನಮನಗಳು...
06/06/2024

ಹಿಂದುಳಿದವರ ಏಳಿಗೆಗೆ ಹಗಲಿರುಳು ಶ್ರಮಿಸಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ಅವರಿಗೆ ಅನಂತಕೋಟಿ ನಮನಗಳು.



ಕರ್ನಾಟಕ ರಾಜ್ಯ ಕಂಡ ಧೀಮಂತ ಮುಖ್ಯಮಂತ್ರಿಗಳ ಪೈಕಿ ದೇವರಾಜ ಅರಸು ಒಬ್ಬರು. ಹಿಂದುಳಿದ ವರ್ಗಕ್ಕೆ ಸೇರಿದ ಅರಸು ಅವರು ತಾರತಮ್ಯ ಮಾಡದೇ ಸರ್ವ ಜನರಿಗೂ ಒಳಿತಾಗುವ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಿದ್ದು ಮಾತ್ರವಲ್ಲ; ಅವುಗಳ ಜಾರಿಗೆ ವಿಶೇಷ ಗಮನ ಹರಿಸಿದರು. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಾರಣ ಮಾಡಲಿಲ್ಲ. ಇಂತಹ ಮಹನೀಯರ ಬಗ್ಗೆ ಲೇಖಕ ಬಸವರಾಜು ಮೇಗಲಕೇರಿ ಅವರು ‘ನಮ್ಮ ಅರಸು’ ಶೀರ್ಷಿಕೆಯಡಿ ಪ್ರಕಟಿಸಿದ ಕೃತಿ.

ಕೃತಿಯ ಬೆಲೆ : ರೂ 600/-
ಅಂಚೆ ವೆಚ್ಚ : ಉಚಿತ

ಪ್ರತಿಗಳಿಗಾಗಿ👇

What's up : 9741613073

#ಅಹನಾ_ಪ್ರಕಾಶನ

 #ಭಾರತದ_ಸಂವಿಧಾನ ( #ಐತಿಹಾಸಿಕ_ದಾಖಲಾತಿಗಳೊಂದಿಗೆ)  #ಸಂಪಾದಕರು_ಡಾ_ಸಿ_ಎಸ್_ದ್ವಾರಕಾನಾಥಲೇಖಕ ಸಿ.ಎಸ್. ದ್ವಾರಕನಾಥ ಅವರ ಕೃತಿ-ಭಾರತದ ಸಂವಿಧಾ...
31/05/2024

#ಭಾರತದ_ಸಂವಿಧಾನ
( #ಐತಿಹಾಸಿಕ_ದಾಖಲಾತಿಗಳೊಂದಿಗೆ)
#ಸಂಪಾದಕರು_ಡಾ_ಸಿ_ಎಸ್_ದ್ವಾರಕಾನಾಥ

ಲೇಖಕ ಸಿ.ಎಸ್. ದ್ವಾರಕನಾಥ ಅವರ ಕೃತಿ-ಭಾರತದ ಸಂವಿಧಾನ: ಐತಿಹಾಸಿಕ ದಾಖಲೆಗಳೊಂದಿಗೆ. ಭಾರತದ ಸಂವಿಧಾನದ ಮಹತ್ವ ಹಾಗೂ ಔನ್ನತ್ಯ ಕುರಿತು ಮನದಟ್ಟು ಮಾಡಿಸಿಕೊಡುವ ಕಳಕಳಿ ಇಲ್ಲಿದೆ. ಭಾರತದ ಸಂವಿಧಾನ ಕುರಿತು ಹಗುರವಾಗಿ ಮಾತನಾಡುವ ಜನರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಈ ಕೃತಿಯು ಕನ್ನಡದಲ್ಲಿ ಮೂಡಿ ಬಂದಿದ್ದು, ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿದೆ ಎಂದು ಕಾನೂನು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಕೃತಿಗೆ ಮುನ್ನುಡಿ ಬರೆದಿದ್ದು, ಲೇಖಕರ ಕಳಕಳಿಯನ್ನು ಶ್ಲಾಘಿಸಿದ್ದಾರೆ.

**********************

ಮುಖಬೆಲೆ = 1250/-
ರಿಯಾಯಿತಿ ದರದಲ್ಲಿ = 1125/-
ಅಂಚೆ ವೆಚ್ಚ = 45/-
ಪಾವತಿಸುವ ಬೆಲೆ = 1180/-

Phone pay Or Google pay No - 7892031478

#ಪ್ರತಿಗಳಿಗಾಗಿ👇
#ವಾಟ್ಸಾಪ್_ಮಾಡಿ = 097416 13073

#ಅಹನಾ_ಪುಸ್ತಕ

 #ಹೊಸ_ಪುಸ್ತಕ ವಾಸ್ತವ ಎಂದರೇನು? ಜ್ಞಾನ ಎಂದರೇನು? ಇವು ಎರಡು ತತ್ವಶಾಸ್ತ್ರವು ಪರಿಶೀಲಿಸುವ ಮುಖ್ಯ ಪ್ರಶ್ನೆಗಳು. ಇಂಥ ವಿಷಯಗಳ ಬಗ್ಗೆ ಅಕ್ಷರಸ್...
31/05/2024

#ಹೊಸ_ಪುಸ್ತಕ

ವಾಸ್ತವ ಎಂದರೇನು? ಜ್ಞಾನ ಎಂದರೇನು? ಇವು ಎರಡು ತತ್ವಶಾಸ್ತ್ರವು ಪರಿಶೀಲಿಸುವ ಮುಖ್ಯ ಪ್ರಶ್ನೆಗಳು. ಇಂಥ ವಿಷಯಗಳ ಬಗ್ಗೆ ಅಕ್ಷರಸ್ಥರಲ್ಲಿ ಪ್ರಾಥಮಿಕ ಮಟ್ಟದ ತಿಳಿವಳಿಕೆಯನ್ನು ಹುಟ್ಟಿಸುವುದಕ್ಕೂ ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ. ತತ್ವಶಾಸ್ತ್ರವೆಂದರೆ ಧರ್ಮಸಂಬಂಧಿಯಾದದ್ದು ಎಂಬ ತಪ್ಪು ಗ್ರಹಿಕೆಯೂ, ಧರ್ಮನಿರಪೇಕ್ಷತೆಯೆಂಬ ಕಲ್ಪನೆಯ ತಪ್ಪು ವ್ಯಾಖ್ಯಾನವೂ ಇದಕ್ಕೆ ಕಾರಣ. ಜೊತೆಗೆ ಲೌಕಿಕ ಬದುಕಿನಲ್ಲಿ ಉದ್ಯೋಗ ಗಳಿಕೆಗೆ ಈ ವಿಷಯ ಒದಗಿ ಬರುವಂಥದಲ್ಲ ಅನ್ನುವ ಉದಾಸೀನವೂ ಸೇರಿದೆ. ತತ್ವಶಾಸ್ತ್ರ ಭಾರತದ್ದೇ ಆಗಲಿ, ಪಶ್ಚಿಮದ್ದೇ ಆಗಲಿ ಸ್ಥೂಲವಾಗಿಯಾದರೂ ತಿಳಿದಿರದಿದ್ದರೆ ಯಾವ ಮಾನವಿಕ ವಿಷಯದ ಗಂಭೀರ ಚರ್ಚೆಯೂ ಅಸಾಧ್ಯವಾಗುತ್ತದೆ. ಜೊತೆಗೆ ಇಂಗ್ಲಿಷ್ ಮೂಲಕ ಅರೆಬರೆಯಾಗಿ ಸಿದ್ಧಾಂತಗಳನ್ನು ತಿಳಿದು ಅವಕ್ಕೆ ಭಾರತೀಯ ನಿದರ್ಶನವನ್ನು ಒದಗಿಸುವುದೇ ವಿದ್ವತ್ತು ಎಂಬ ಭ್ರಮೆಯೂ ಮೂಡಿದೆ. ಇಂಥ ಹೊತ್ತಿನಲ್ಲಿ, ಹಲವು ದಶಕಗಳ ನಂತರ ಭಾರತೀಯ ತತ್ವಶಾಸ್ತ್ರ ಕುರಿತ ಕಿರುಹೊತ್ತಿಗೆ ಸ್ವಾಗತಾರ್ಹವಾದದ್ದು.

-ಓ.ಎಲ್. ನಾಗಭೂಷಣ ಸ್ವಾಮಿ
(ಮುನ್ನುಡಿಯಿಂದ)

*****************
ಮುಖಬೆಲೆ = 100/-
ಅಂಚೆ ವೆಚ್ಚ = 30/-
ಪಾವತಿಸುವ ಹಣ = 130/-
*****************
ಪುಸ್ತಕ ಖರೀದಿಸಲು: 097416 13073

ಬಹು ನಿರೀಕ್ಷೆಯ ಪುಸ್ತಕ ಈಗ ಲಭ್ಯ...... ಈ ಪುಸ್ತಕದಲ್ಲಿ ಮಹಾತ್ಮ ಗಾಂಧಿಯ ಕೊಲೆಗೆ ಕಾರಣವಾದ ಮತೀಯ ರಾಜಕೀಯ ಭಾರತದಲ್ಲಿ ಹುಟ್ಟಿ ಬೆಳೆದ ಕತೆ ಇದೆ...
11/05/2024

ಬಹು ನಿರೀಕ್ಷೆಯ ಪುಸ್ತಕ ಈಗ ಲಭ್ಯ......

ಈ ಪುಸ್ತಕದಲ್ಲಿ ಮಹಾತ್ಮ ಗಾಂಧಿಯ ಕೊಲೆಗೆ ಕಾರಣವಾದ ಮತೀಯ ರಾಜಕೀಯ ಭಾರತದಲ್ಲಿ ಹುಟ್ಟಿ ಬೆಳೆದ ಕತೆ ಇದೆ. ಆ ರಾಜಕೀಯ ಮಹಾತ್ಮ ಗಾಂಧಿಯನ್ನು ಕೆಡವಲು ಹೂಡಿದ ಸಂಚಿನ ಸೂಕ್ಷ್ಮ ವಿವರಣೆ ಇದೆ. ಆ ರಾಜಕೀಯವನ್ನು ಹುಟ್ಟು ಹಾಕಿ, ನೀರೆರೆದು ಪೋಷಿಸಿ, ಹೆಮ್ಮರವನ್ನಾಗಿ ಮಾಡಿದ ಪ್ರಮುಖ ವ್ಯಕ್ತಿಗಳ ವ್ಯಕ್ತಿತ್ವದ ಅನಾವರಣವಿದೆ. ಪುಸ್ತಕದ ಕೇಂದ್ರದಲ್ಲಿರುವುದು ಅಂತಿಮವಾಗಿ ಮಹಾತ್ಮ ಗಾಂಧಿಯ ಎದೆಗೆ ಗುಂಡಿಟ್ಟ ನಾಥುರಾಮ್ ಗೋಡ್ಸೆಯ ಕತೆಯಾದರೂ, ಇಲ್ಲಿ ಗೋಡ್ಸೆಎಂಬ ವ್ಯಕ್ತಿಗಿಂತ ಹೆಚ್ಚಾಗಿ ಕಾಣಿಸುವುದು ಆತನನ್ನು ಕೊಲೆಗಡುಕನನ್ನಾಗಿ ಮಾಡಿದ ಮತೀಯ ರಾಜಕೀಯದ ಒಳಸುಳಿಗಳು.

******************

ಮುಖಬೆಲೆ = 360/-
ಅಂಚೆ ವೆಚ್ಚ = 30/-
ಪಾವತಿಸುವ ಹಣ = 390/-

Phone Pay No : 7892031478

ಪ್ರತಿಗಳಿಗಾಗಿ ಸಂಪರ್ಕಿಸಿ 9741613073

#ಅಹನಾ_ಪ್ರಕಾಶನ

ಇದೊಂದು ಮಹತ್ವದ ಕೃತಿ  #ಬಸವಣ್ಣನವರು ಜಗತ್ತಿಗೆ ನೀಡಿದ ಧರ್ಮ ತತ್ವ ಸಿದ್ದಾಂತ ಹಾಗೂ ಬಸವಾದಿ ಶರಣರ ಜೀವನ ಚರಿತ್ರೆ. ಲೇಖಕರು : 'ಅಭಿನವ' ಅಲ್ಲಮ ...
10/05/2024

ಇದೊಂದು ಮಹತ್ವದ ಕೃತಿ

#ಬಸವಣ್ಣನವರು ಜಗತ್ತಿಗೆ ನೀಡಿದ ಧರ್ಮ ತತ್ವ ಸಿದ್ದಾಂತ ಹಾಗೂ ಬಸವಾದಿ ಶರಣರ ಜೀವನ ಚರಿತ್ರೆ.

ಲೇಖಕರು : 'ಅಭಿನವ' ಅಲ್ಲಮ ಪ. ಪೂ ಶ್ರೀ ಬಸವ ನವಲಿಂಗ ಶರಣರು.
ಶ್ರೀ ಪ್ರಭುದೇವ ಜ್ಞಾನಕೇಂದ್ರ, ಸಂತೆಕಡೂರು ಶಿವಮೊಗ್ಗ.

ಮುಖಬೆಲೆ = 1000/-
ರಿಯಾಯಿತಿ = 900/-
ಅಂಚೆ ವೆಚ್ಚ = ಉಚಿತ
ಪಾವತಿಸುವ ಹಣ = 900/-

Phone pay No : 7892031478

#ಪ್ರತಿಗಳಿಗಾಗಿ,👇

WhatsApp : 097416 13073

 #ಹೊಸ_ಪುಸ್ತಕಶರಣರ ನಾಡಿನ ಸೂಫಿ ಮಾರ್ಗಲೇಖಕರು: ಪರ್ವೀನ್ ಸುಲ್ತಾನಾ ಪರ್ವೀನ್ ಸುಲ್ತಾನಾ ನಮ್ಮ ಶರಣ-ಸೂಫಿ ಸಂತರ ನಾಡಿನ ಸಹಜ ಪ್ರತಿಭೆ. ಸರಕಾರಿ ...
10/05/2024

#ಹೊಸ_ಪುಸ್ತಕ

ಶರಣರ ನಾಡಿನ ಸೂಫಿ ಮಾರ್ಗ

ಲೇಖಕರು: ಪರ್ವೀನ್ ಸುಲ್ತಾನಾ

ಪರ್ವೀನ್ ಸುಲ್ತಾನಾ ನಮ್ಮ ಶರಣ-ಸೂಫಿ ಸಂತರ ನಾಡಿನ ಸಹಜ ಪ್ರತಿಭೆ. ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿಯಾಗಿ ಕಲಿಯುವ ಮತ್ತು ಕಲಿಸುವ ಎರಡರಲ್ಲೂ ಸೈ ಎನಿಸಿಕೊಂಡ ಭರವಸೆಯ ಕವಯಿತ್ರಿ. ತನ್ನ ಪರಿಶ್ರಮ ಪ್ರಯತ್ನಗಳನ್ನು ನಂಬಿಕೊಂಡು ಅಕಾಡೆಮಿಕ್ ವಲಯದೊಳಗೂ ಗುರುತಿಸಿಕೊಂಡು ಈಗ ತುಂಬ ಅಪರೂಪದ ಕೃತಿಯೊಂದನ್ನು ಕನ್ನಡಿಗರ ಕೈಗೆ ಇಡುತ್ತಿರುವುದು ಪ್ರಶಂಸನೀಯ. ಶರಣರ ನಾಡಿನ ಸೂಫಿ ಮಾರ್ಗ ಎಂಬ ಕೃತಿಯು ವರ್ತಮಾನದ ಕಲುಷಿತ ರಾಜಕಾರಣದ ಅಪಸವ್ಯಗಳಿಗೆ ಸಮರ್ಥವಾದ ಉತ್ತರ ನೀಡಬಲ್ಲ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಧರ್ಮಾಂಧರ ಕಣ್ಣು ತೆರೆಯಿಸಬಲ್ಲ ಕೃತಿ. ಕಲಬುರಗಿ, ಬೀದರ - ಇವು ಶರಣ ಮತ್ತು ಸೂಫಿಗಳ ಆಡುಂಬೊಲ. ಇಲ್ಲಿನ ಬಸವಾದಿ ಶರಣರ ಚಳುವಳಿಯು ಕನ್ನಡ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯೆಂದು ಗುರುತಿಸಲಾಗಿರುವಂತೆಯೇ ಇಲ್ಲಿನ ಸೂಫಿ ಪಂಥಗಳು ಭಾರತದ ದಾರ್ಶನಿಕ ಪರಂಪರೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿವೆ ಎಂಬುದು ಒಂದು ವಿಶೇಷ.

ಶರಣರ ನಾಡಿನ ಸೂಫಿ ಪರಂಪರೆಯ ಬಗ್ಗೆ ವಿಸ್ತ್ರತವಾದ ಅಧ್ಯಯನಗಳು ನಡೆದಿಲ್ಲ. ಈ ಕೊರತೆಯನ್ನು ಪರ್ವೀನ್ ಸುಲ್ತಾನಾ ಅವರ ಶರಣರ ನಾಡಿನ ಸೂಫಿ ಮಾರ್ಗ * ತಕ್ಕ ಮಟ್ಟಿಗೆ ನೀಗಿಸುವ ಪ್ರಯತ್ನ ಮಾಡಿದೆ-ಎಂಬುದು ಹರ್ಷದಾಯಕವಾದ ಸಂಗತಿ.

ಉರ್ದು ಮತ್ತು ಕನ್ನಡದ ನಡುವೆ ಸೇತುವೆಯಾಗಿ ಪರ್ವೀನ್ ಅವರು ತಮ್ಮ ಜಿಜ್ಞಾಸೆಯನ್ನು ಉತ್ತರೋತ್ತರವಾಗಿ ವರ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಲೆಂದು ಹಾರೈಸುತ್ತೇನೆ.

ಡಾ. ಮೀನಾಕ್ಷಿ ಬಾಳಿ.

*******************

ಮುಖಬೆಲೆ = 650/-
ರಿಯಾಯಿತಿ ದರದಲ್ಲಿ = 585/-
ಅಂಚೆ ವೆಚ್ಚ = 35/-
ಪಾವತಿಸುವ ಹಣ = 620/-

******************

Phone Pay No : 7892031478

ಪ್ರತಿಗಳಿಗಾಗಿ 👇
What's up : 9741613073

#ಅಹನಾ_ಪ್ರಕಾಶನ

 #ಹಿಂದು_ರಾಷ್ಟ್ರದೆಗೆ_ಹಿಂಸೆಯ_ಹೆಜ್ಜೆಗಳು  #ಲೇಖಕರು :  #ಲತಾಮಾಲ "ಧರ್ಮದ ನಶೆಯಲ್ಲಿರುವ ನಮಗೆ ನಮ್ಮ ಆರೋಗ್ಯ, ಮಕ್ಕಳ ಭವಿಷ್ಯ, ಅವರ ಶಿಕ್ಷಣ, ...
06/05/2024

#ಹಿಂದು_ರಾಷ್ಟ್ರದೆಗೆ_ಹಿಂಸೆಯ_ಹೆಜ್ಜೆಗಳು

#ಲೇಖಕರು : #ಲತಾಮಾಲ

"ಧರ್ಮದ ನಶೆಯಲ್ಲಿರುವ ನಮಗೆ ನಮ್ಮ ಆರೋಗ್ಯ, ಮಕ್ಕಳ ಭವಿಷ್ಯ, ಅವರ ಶಿಕ್ಷಣ, ಉದ್ಯೋಗ, ರೈತರ ಕಷ್ಟಗಳು, ಏರಿದ ಬೆಲೆ, ಯಾವುದೂ ಕಾಣಿಸುತ್ತಿಲ್ಲ. ನಾವು ಈ ನಶೆಯ ಮಜವನ್ನು ಮುಸ್ಲಿಂ-ಕ್ರಿಶ್ಚಿಯನ್ನರ ದ್ವೇಷದಿಂದ ಪಡೆಯುತ್ತಿದ್ದೇವೆ ಎಂದು ಭ್ರಮಿಸುತ್ತಿದ್ದೇವೆ. ಆದರೆ, ಈ ದ್ವೇಷದ ನಶೆಯು ನಮ್ಮೊಳಗಿನದೇ ಆಗಿದ್ದು ಅದು ಮುಂದೆ ನಮ್ಮನ್ನೇ ಸುಡಲಿದೆ..."

ಲತಾಮಾಲಾ ಅವರ ಪುಸ್ತಕ ಈ ಸಂದರ್ಭದಲ್ಲಿ ಹಲವಾರು ಕಾರಣಗಳಿಗಾಗಿ ಮಹತ್ವದ್ದಾಗಿದೆ ಹಾಗೂ ಕಗ್ಗತ್ತಲು ಆವರಿಸುತ್ತಿರುವ ಈ ಹೊತ್ತಿನಲ್ಲಿ ಬೆಳಕಿನ ಭರವಸೆಯನ್ನು ಕೊಡುತ್ತದೆ. ಜೀವನಾನುಭವಗಳು ಕೊಟ್ಟ ವಿವೇಕ ಮತ್ತು ವಿದ್ವತ್ತಿನ ತಿಳಿವು ಎರಡನ್ನು ಬೆರೆಸಿ ಸಂಘಿಗಳ ಹುನ್ನಾರವನ್ನು ಲತಾಮಾಲ ಅವರು ಬಯಲುಗೊಳಿಸಿರುವ ರೀತಿ ಕನ್ನಡದ ಸಂದರ್ಭದಲ್ಲಿ ಅನನ್ಯವಾದದ್ದು ಮತ್ತು ಅಗತ್ಯವಾದುದು.

#ಶಿವಸುಂದರ್

*******************

ಮುಖಬೆಲೆ = 250/-
ಅಂಚೆ ವೆಚ್ಚ = 30/-
ಪಾವತಿಸುವ ಹಣ = 280/-

ಪ್ರತಿಗಳಿಗಾಗಿ ಸಂಪರ್ಕಿಸಿ : 097416 13073

Phone pay No : 7892031478

#ಅಹನಾ_ಪ್ರಕಾಶನ

 #ಹೊಸತು ಬಹು ನಿರೀಕ್ಷಿತ ಜಿ. ಟಿ. ಜಾಹ್ನವಿ ಅವರ ಕಥಾಸಂಕಲನ' ಒಬ್ರು ಸುದ್ಯಾsss ಕೆ... ಒಬ್ರು ಗದ್ಲ್ಯಾsss ಕೆ...' ಈಗ ಲಭ್ಯವಿದೆ...ಬಿ.ಟಿ. ಜ...
06/05/2024

#ಹೊಸತು

ಬಹು ನಿರೀಕ್ಷಿತ ಜಿ. ಟಿ. ಜಾಹ್ನವಿ ಅವರ ಕಥಾಸಂಕಲನ
' ಒಬ್ರು ಸುದ್ಯಾsss ಕೆ... ಒಬ್ರು ಗದ್ಲ್ಯಾsss ಕೆ...'

ಈಗ ಲಭ್ಯವಿದೆ...

ಬಿ.ಟಿ. ಜಾಹ್ನವಿ ಅವರು ತಮ್ಮ ಕಳೆದುಕೊಂಡವಳು ಮತ್ತು ಇತರ ಕಥೆಗಳು ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದವರು.
ಈ ಸಂಕಲನದ ವ್ಯಭಿಚಾರ','ವಿಮುಖ'ದಂತಹ ಕತೆಗಳನ್ನು ಓದಿದ ಹಲವರು ಬೆಚ್ಚಿಬಿದ್ದರೆ, ಕೆಲವರು ಅವುಗಳಲ್ಲಿ ಪ್ರಕಟವಾದ ಪ್ರಾಮಾಣಿಕತೆಗೆ ತಲೆಬಾಗಿದ್ದೂ ನಿಜ.

ಈ ಸಂಕಲನದ ಪ್ರತಿಯೊಂದು ಕತೆಯೊಳಗೂ, ಒಂದೊಂದು ಬಗೆಯ ಹುಡುಕಾಟವಿದೆ, ಈ ಹುಡುಕಾಟ ಜೀವಂತಿಕೆಯ ಲಕ್ಷಣವಾದಂತೆ ಬೆಳವಣಿಗೆಯ ಲಕ್ಷಣವೂ ತಮ್ಮ ಹುಡುಕಾಟದ ಫಲವಾಗಿ ಪರಿಹಾರವನ್ನು ಕೆಲವರು ಕತೆಯ ಕೊನೆಯಲ್ಲಿ ಕಂಡುಕೊಂಡರೆ, ಇನ್ನು ಕೆಲವರು ಕಾಣಲಾಗದೆ ಹತಾಶರಾಗುವುದಿದೆ. ಇನ್ನೊಬ್ಬರ ಉತ್ತರದ ಹುಡುಕಾಟಕ್ಕೆ ನಿಮಿತ್ತವಾಗುವವರು ಕೆಲವರಾದರೆ, ಇನ್ನೊಬ್ಬರಿಂದ ಉತ್ತರ ಕಂಡುಕೊಳ್ಳುವವರು ಕೆಲವರು.

- ಸಬಿಹಾ ಭೂಮಿಗೌಡ .

*******************

ಮುಖ ಬೆಲೆ = 350/-
ಮುಖಬೆಲೆ = ಉಚಿತ

Phone pay No : 7892031478

ವಾಟ್ಸಪ್ ಮಾಡಿ : 9741613073*

#ಅಹನಾ_ಪ್ರಕಾಶನ

*ಹೊಸ ಪುಸ್ತಕ*     #ಮಾನವತೆಯ_ಮಾರ್ಗದಾತ  #ಲೇಖಕರು :  #ಅಪ್ಪಗೆರೆ_ಸೋಮಶೇಖರ್ ಬಾಬಾಸಾಹೇಬ್‌ ಡಾ.ಬಿ.ಆರ್‌ ಅಂಬೇಡ್ಕರ್‌ ಬದುಕು ಮತ್ತು ಹೋರಾಟದ ಚ...
05/05/2024

*ಹೊಸ ಪುಸ್ತಕ*

#ಮಾನವತೆಯ_ಮಾರ್ಗದಾತ

#ಲೇಖಕರು : #ಅಪ್ಪಗೆರೆ_ಸೋಮಶೇಖರ್

ಬಾಬಾಸಾಹೇಬ್‌ ಡಾ.ಬಿ.ಆರ್‌ ಅಂಬೇಡ್ಕರ್‌ ಬದುಕು ಮತ್ತು ಹೋರಾಟದ ಚಿಂತನ ಕಥನ

ಅಜ್ಞಾನ, ಅಂಧಕಾರ ಕವಿದ ಭಾರತಕ್ಕೆ ಬೆಳಕಿನ ಸೂರ್ಯನಂತೆ ಬಂದವರು ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕ‌ರ್. ಸ್ವತಂತ್ರ ಭಾರತವು ಬಹುತ್ವ ಭಾರತವಾಗಿ ಉಳಿಯುವಂತೆ ಸಂವಿಧಾನ ಎಂಬ ರಕ್ಷಾಕವಚವನ್ನು ನೀಡಿದವರು. ಬಾಬಾಸಾಹೇಬರು ಕೇವಲ ಒಂದು ಸಮುದಾಯದ ನಾಯಕರಲ್ಲ, ಎಲ್ಲ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಮಾತು ಕೊಟ್ಟ ಮಹಾನಾಯಕ. ಲೋಕಜ್ಞಾನಿ ಅಂಬೇಡ್ಕರ್; ಎಲ್ಲ ವಂಚಿತ ಸಮುದಾಯಗಳ ಪಾಲಿನ ದಾರಿ ದೀಪ ಮಾನವತೆಯ ಮೇರು ಶಿಖರ. ಇಂಥ ಮಹಾ ಮಾನವನ ವ್ಯಕ್ತಿತ್ವವನ್ನು ಅಪ್ಪಗೆರೆ ಸೋಮಶೇಖರ್ ಅವರು ಅತ್ಯಂತ ಅದ್ಭುತವಾಗಿ, ಆತ್ಮೀಯವಾಗಿ, ಅಧ್ಯಯನಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

#ಸನತ್_ಕುಮಾ‌ರ್_ಬೆಳಗಲಿ

-----------------------------

ಮುಖಬೆಲೆ = 250/-
ಅಂಚೆ ವೆಚ್ಚ = 30/-
ಪಾವತಿಸವ ಹಣ = 280/-

Phone pay Or Google pay No : 7892031478

ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ : 9741613073

#ಅಹನಾ_ಪ್ರಕಾಶನ

ಶ್ರೀ ಸಿದ್ದಯ್ಯ ಪುರಾಣಿಕರು ಅರ್ವಾಚೀನ ಶ್ರೀ ಸಾಮಾನ್ಯರಿಗೆ ಪ್ರಾಚೀನ ಸಾಮಾನ್ಯತಾಶ್ರೀಯನ್ನು ಸುಲಭ ಮಧುರ ರೂಪದಲ್ಲಿ ಉಣಬಡಿಸಿದ್ದಾರೆ, ಅವರ ' ಿತಾ...
16/12/2023

ಶ್ರೀ ಸಿದ್ದಯ್ಯ ಪುರಾಣಿಕರು ಅರ್ವಾಚೀನ ಶ್ರೀ ಸಾಮಾನ್ಯರಿಗೆ ಪ್ರಾಚೀನ ಸಾಮಾನ್ಯತಾಶ್ರೀಯನ್ನು ಸುಲಭ ಮಧುರ ರೂಪದಲ್ಲಿ ಉಣಬಡಿಸಿದ್ದಾರೆ, ಅವರ ' ಿತಾಮೃತ'ದಲ್ಲಿ.

ಉತ್ತಮ ವರ್ಗದವರಿಗೆ ಮಾತ್ರ ಮೀಸಲು ಎಂದು ಭ್ರಮಿಸಿದ್ದ ಭಕ್ತಿ, ಜ್ಞಾನ, ಭಗವದನುಭೂತಿ ಮತ್ತು ಆಧ್ಯಾತ್ಮಿಕ ಉನ್ನತಿ ಇವುಗಳಿಗೆ ಸಾಮಾನ್ಯ ಜನರೂ ಕೆಳವೃತ್ತಿಯವರೆಂದೂ ಕೀಳು ಜಾತಿಯವರೆಂದೂ ಮೂಲೆಗೆ ತಳ್ಳಿಸಿಕೊಂಡು ಅನಾಮಧೇಯರೂ ಅಜ್ಞಾತರೂ ಆಗಿ, ದೇವಸ್ಥಾನಗಳಿಗೂ ರಾಜಾಸ್ಥಾನಗಳಿಗೂ ಬಹುದೂರದಲ್ಲಿಯೆ ನಿಂತಿರುತ್ತಿದ್ದವರೂ ಸಾಧಕರಾಗಿ, ಶರಣರಾಗಿ, ಸಿದ್ಧರಾಗಿ ಪರಮ ಶ್ರೇಯಸ್ಸಿನ ಮಹೋನ್ನತ ಶಿಖರಗಳಿಗೆ ಏರಿದ ರೋಮಾಂಚಕ ನಿದರ್ಶನಗಳನ್ನೊಳಗೊಂಡ ಈ ಕಥನ ಕೃತಿ ನಮ್ಮ ಸಾಮಾನ್ಯ ಜನವರ್ಗಕ್ಕೆ ಆಶೆ ಧೈಶ್ಯ ಆತ್ಮಗೌರವಗಳನ್ನು ದಯಪಾಲಿಸಿ, ಅವರನ್ನು ರಾಜಕೀಯ ಪ್ರಜಾಸತ್ತೆಗೆ ಮಾತ್ರವಲ್ಲದೆ ಆಧ್ಯಾತ್ಮಿಕವಾದ ಆತ್ಮಶ್ರೀಯ ಪ್ರಜಾಸತ್ತೆಗೂ ಅಧಿಕಾರಿಗಳನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ.

ಶರಣರ ಜೀವನ ಚರಿತ್ರೆಯ ತಾತ್ಪರವನ್ನೂ ಹೃದಯವನ್ನೂ ದರ್ಶನ ಧ್ವನಿಯನ್ನೂ ಗ್ರಹಿಸಿ, ಆಧುನಿಕವಾದ ವೈಜ್ಞಾನಿಕ ದೃಷ್ಟಿಯಿಂದಲೂ ವಿಚಾರಬುದ್ಧಿಯಿಂದಲೂ ಅವರು ಮುಂದುವರಿದರೆ ಸರ್ವಧರ್ಮ ಸಮಾನತೆಯ ಮೇಲೆ ನಿಂತಿರುವ ಭಾರತ ರಾಷ್ಟ್ರಕ್ಕೆ ಶಾಶ್ವತವೂ ಸ್ಥಿರವೂ ಆಗಿರುವ ಅಡಿಪಾಯ ಸಿದ್ಧವಾಗುತ್ತದೆ; ಲೋಕಕ್ಕೂ ಮಾರ್ಗದರ್ಶನವಾಗಬಹುದು.

- ಕುವೆಂಪು (ಮುನ್ನುಡಿಯಿಂದ)

*******************

ಮುಖಬೆಲೆ = 600/-
ಅಂಚೆ ವೆಚ್ಚ = ಉಚಿತ

ಆಸಕ್ತರು ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ : 9741613073

Phone pay / Google pay No : 7892031478

#ಅಹನಾ_ಪ್ರಕಾಶನ

 #ಹೊಸ_ಪುಸ್ತಕ #ವಿ_ಡಿ_ಸಾವರ್ಕರ್:  #ಏಳು_ಮಿಥ್ಯೆಗಳು ಡಾ. ಶಂಸುಲ್ ಇಸ್ಲಾಂ ಕನ್ನಡಕ್ಕೆ : ತಡಗಳಲೆ ಸುರೇಂದ್ರ ರಾವ್. ಭಾರತದ ಮೊದಲ ಗೃಹ ಸಚಿವ ಸರ...
15/12/2023

#ಹೊಸ_ಪುಸ್ತಕ

#ವಿ_ಡಿ_ಸಾವರ್ಕರ್: #ಏಳು_ಮಿಥ್ಯೆಗಳು
ಡಾ. ಶಂಸುಲ್ ಇಸ್ಲಾಂ
ಕನ್ನಡಕ್ಕೆ : ತಡಗಳಲೆ ಸುರೇಂದ್ರ ರಾವ್.

ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಫೆಬ್ರವರಿ 27, 1948 ರಲ್ಲಿ ಪ್ರಧಾನ ಮಂತ್ರಿ ನೆಹರೂರವರಿಗೆ ಬರೆದ ಪತ್ರದಲ್ಲಿ ಹೇಳುತ್ತಾರೆ: "ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾದ ಮತಾಂಧರ ಗುಂಪೊಂದು ಪಿತೂರಿಯನ್ನು ಮಾಡುತ್ತದೆ ಮತ್ತು ಅದನ್ನು ಆಗುವಂತೆ ನೋಡಿಕೊಳ್ಳುತ್ತದೆ". ಮಹಾತ್ಮಾ ಗಾಂಧಿಯವರ ಹತ್ಯೆಯ ಕುರಿತು ಪಟೇಲರು ಬರೆದ ಪತ್ರ ಅದಾಗಿತ್ತು.

ಇವತ್ತಿನ ಹಿಂದುತ್ವ ಅನುಯಾಯಿಗಳು ಅದೇ ಸಾವರ್ಕರರನ್ನು ಒಬ್ಬ ಸ್ವಾತಂತ್ರ್ಯ ಹೋರಾಟಗಾರನೆಂದು ವೈಭವೀಕರಿಸಲು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
..ಪ್ರಜಾಸತ್ತಾತ್ಮಕ ಜಾತ್ಯತೀತ ಭಾರತವನ್ನು ರಚಿಸಿ ಸರಿಸುಮಾರು ಒಂದು ಶತಮಾನವೇ ಕಳೆದುಹೋಗುತ್ತಿರುವಾಗ ಅವರೊಬ್ಬ ಮಹಾನ್ . ಕ್ರಾಂತಿಕಾರಿ, ಅದಮ್ಯ ಸ್ವಾತಂತ್ರ್ಯ ಹೋರಾಟಗಾರ, ಮಹೋನ್ನತ ವಿಚಾರವಾದಿ ಇತ್ಯಾದಿ ಇತ್ಯಾದಿ ಎಂದು ಅವರನ್ನು ಗುತ್ತಿಗೆ ಪಡೆದವರಂತೆ ಸ್ತುತಿಸುತ್ತಿದ್ದಾರೆ. ಆದರೆ ಸಾವರ್ಕರ್ ಅವರ ಬರಹಗಳು ಮತ್ತು ಕಾರ್ಯಾಚರಣೆಗಳನ್ನು ಗಮನಿಸಿದರೆ ಈ ಎಲ್ಲಾ ಸಮರ್ಥನೆಗಳು ಸುಳ್ಳು ಎಂದು ಸಾಬೀತಾಗುತ್ತವೆ.
..ಭಾರತದ ಸ್ವಾತಂತ್ರ್ಯ ಚಳುವಳಿಯ ಇತಿಹಾಸವು ತೆರೆದುಕೊಂಡಂತೆ ಲಭ್ಯವಾದ ಕೆಲವು ಚಾರಿತ್ರಿಕ ವಾಸ್ತವಾಂಶಗಳನ್ನು ಮಂಡಿಸುವ ಸಲುವಾಗಿ ನಡೆಸಿದ ಪ್ರಾಮಾಣಿಕ ಹಂಬಲದ ಫಲವೇ ಈ ಪುಸ್ತಕ.
..ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡುವ ಹಾಗೂ ವಂಚನೆಯಲ್ಲಿ ತೊಡಗಿರುವ ಹಿಂದುತ್ವ ಬಂಟರನ್ನು ಈ ದಾಖಲೆಗಳು ನಿಜಕ್ಕೂ ಧೈರ್ಯಗೆಡಿಸುತ್ತವೆ. ಮಾಹಿತಿ ಇಲ್ಲದ ಮುಖಂಡರು ಮತ್ತು ಈ 'ವೀರ' ಸಾವರ್ಕರರನ್ನು ವೈಭವೀಕರಿಸುವ ಜನರು ಈ ನಿಜಾಂಶಗಳು ಮತ್ತು ಸುಳ್ಳು ಪುರಾಣಗಳ ನಡುವಿನ ವ್ಯತ್ಯಾಸಗಳನ್ನು ಅರಿತುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ಭಾರತದಲ್ಲಿ ರಾಷ್ಟ್ರೀಯವಾದದ ಉದಯ ಮತ್ತು ಬೆಳವಣಿಗೆಯ ಬಗ್ಗೆ ಮೂಲಭೂತ ಸಂಶೋಧನೆಗಳಲ್ಲಿ ತೊಡಗಿರುವ ಈ ಲೇಖಕರು.

#(ಬೆನ್ನುಡಿಯಿಂದ)

*****************

ಮುಖಬೆಲೆ = 180/-
ಅಂಚೆ ವೆಚ್ಚ =‌ 30/-
ಪಾವತಿಸುವ ಹಣ = 210/-

ಆಸಕ್ತರು ಪ್ರತಿಗಳಿಗಾಗಿ ಸಂಪರ್ಕಿಸಿ 👇

#ಅಹನಾ_ಪ್ರಕಾಶನ : 097416 13073

ಹೊಸ ಪುಸ್ತಕ  "ಬಾಬಾಸಾಹೇಬ್ ಅಂಬೇಡ್ಕರರು ಒಡಲಾಳದಿಂದ ಗ್ರಹಿಸಿದ ಭಾರತ ಮತ್ತು ಭಾರತೀಯರು"ಎಂಬ ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿ ಭಾರತ ಹಾಗೂ ಭಾರ...
14/12/2023

ಹೊಸ ಪುಸ್ತಕ

"ಬಾಬಾಸಾಹೇಬ್ ಅಂಬೇಡ್ಕರರು ಒಡಲಾಳದಿಂದ ಗ್ರಹಿಸಿದ ಭಾರತ ಮತ್ತು ಭಾರತೀಯರು"

ಎಂಬ ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿ ಭಾರತ ಹಾಗೂ ಭಾರತೀಯರನ್ನು ಕಾಣಬೇಕಾದ ಒಡಲಾಳದ ವೈಚಾರಿಕ ಲೇಖನಗಳ ಕೃತಿ ಪ್ರಕಟಗೊಂಡಿದೆ.

*************

ಮುಖಬೆಲೆ = 550/-
ಅಂಚೆ ವೆಚ್ಚ = ಉಚಿತ

ಆಸಕ್ತರು ಪ್ರತಿಗಳಿಗಾಗಿ ಸಂಪರ್ಕಿಸಿ👇

ಅಹನಾ ಪ್ರಕಾಶನ : 9741613073

Address

Laggere

Telephone

+919741613073

Website

Alerts

Be the first to know and let us send you an email when Basavaraj Sannakki posts news and promotions. Your email address will not be used for any other purpose, and you can unsubscribe at any time.

Contact The Business

Send a message to Basavaraj Sannakki:

Share

Category